<p><strong>ರಾಮನಾಥಪುರ: </strong>ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಬಳಿಗೆರೆ ಕೊಪ್ಪಲು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳು ಹಾಗೂ 600 ಮತದಾರಿದ್ದಾರೆ. 800ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು ಚರಂಡಿ, ಶೌಚಾಲಯ, ಬೀದಿದೀಪ... ಹೀಗೆ ಅತ್ಯಗತ್ಯ ಸೌಕರ್ಯಗಳಿಂದ ವಂಚಿವಾಗಿದೆ.<br /> <br /> ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಅಕ್ಕಪಕ್ಕದಲ್ಲೇ ಕೊಳಚೆ ನೀರು ನಿಲ್ಲುತ್ತದೆ. ಚರಂಡಿಯ ಅಸುಪಾಸಿನಲ್ಲಿ ಗಿಡಗಂಟಿ ಬೆಳೆದು ಕೊಳಚೆ ನೀರು ಸರಿಯಾಗಿ ಹರಿಯದೇ ಗಬ್ಬು ವಾಸನೆ ಬರುತ್ತಿದೆ. ಊರಿನ ಪ್ರಮುಖ ಬೀದಿಯಲ್ಲಿ ಚರಂಡಿ ಕಟ್ಟಿಕೊಂಡಿದರೂ ಸಂಬಂಧಪಟ್ಟವರು ಈ ಕಡೆ ಗಮನ ಹರಿಸದೇ ಈ ಚರಂಡಿಯ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿವೆ.<br /> <br /> ಶೌಚಾಲಯದ ಸಮಸ್ಯೆ: ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, ಅದರಲ್ಲಿ ಆರ್ಥಿಕವಾಗಿ ಚೆನ್ನಾಗಿ ಇರುವವರು ಮಾತ್ರ ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ. ಗ್ರಾಮದ ಬಹುತೇಕ ಕುಟುಂಬದವರು ಇನ್ನೂ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ ಎನ್ನುತ್ತಾರೆ ಗ್ರಾಮದ ನಿವಾಸಿ ರವಿ.<br /> <br /> ಇಲ್ಲಿನ ಬಹುತೇಕರು ತಮ್ಮ ಜಾನುವಾರುಗಳನ್ನು ಹಗಲು ಇರುಳು ಎನ್ನದೆ ಶಾಲಾ ಮೈದಾನದಲ್ಲಿ ಕಟ್ಟಿಹಾಕುವುದರಿಂದ ಶಾಲಾ ಮೈದಾನ ಹೋಗಿ ದನಗಳನ್ನು ಕಟ್ಟುವ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಇರುವ ಒಂದೇಒಂದು ಕ್ರೀಡಾಂಗಣ ಕೂಡ ಇಲ್ಲದಂತಾಗಿದೆ.<br /> <br /> ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳು ಮೂಲ ಸೌಕರ್ಯಗಳಾದ ಚರಂಡಿ, ಶೌಚಾಲಯ, ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಈ ಗ್ರಾಮ ಅಭಿವೃದ್ಧಿ ಕಾಣುವಂತೆ ಮಾಡಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಒಕ್ಕೂರಲಿನ ಕೂಗು.<br /> <br /> <strong>ಬಲಿಗೆ ಬಾಯ್ದೆರೆದ ಕೊಳವೆಬಾವಿ</strong><br /> ಕಬಳಿಗೆರೆ ಕೊಪ್ಪಲಿನ ಸಮೀದಪ ರಾಂಪುರ ಗ್ರಾಮಕ್ಕೆ 2006ರಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದರು. ಆಗ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಸಮೀಪ ಕೊಳವೆಬಾವಿ ತೆಗಸಲಾಗಿತ್ತು. ಈ ಕೊಳವೆಬಾವಿಯಲ್ಲಿ ನೀರು ಬರಲಿಲ್ಲ. ಆದರೆ, ಇಲ್ಲಿಯವರೆಗೂ ಅದನ್ನು ಮುಚ್ಚಿಲ್ಲ. ಕೊಳವೆಬಾವಿಗಳೇ ಈಚೆಗೆ ಭಾರಿ ಸುದ್ದಿ ಮಾಡುತ್ತಿದ್ದರೆ ಇಲ್ಲಿಗೆ ಯಾವ ಅಧಿಕಾರಿಯೂ ಬಂದು ನೋಡಿಲ್ಲ. ಇದರ ಹತ್ತಿರವೇ ಮಕ್ಕಳು ಆಟವಾಡುತ್ತಾರೆ ಎಂಬುದು ಇನ್ನೂ ಭಯಾನಕ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಾಥಪುರ: </strong>ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಬಳಿಗೆರೆ ಕೊಪ್ಪಲು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳು ಹಾಗೂ 600 ಮತದಾರಿದ್ದಾರೆ. 800ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು ಚರಂಡಿ, ಶೌಚಾಲಯ, ಬೀದಿದೀಪ... ಹೀಗೆ ಅತ್ಯಗತ್ಯ ಸೌಕರ್ಯಗಳಿಂದ ವಂಚಿವಾಗಿದೆ.<br /> <br /> ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಅಕ್ಕಪಕ್ಕದಲ್ಲೇ ಕೊಳಚೆ ನೀರು ನಿಲ್ಲುತ್ತದೆ. ಚರಂಡಿಯ ಅಸುಪಾಸಿನಲ್ಲಿ ಗಿಡಗಂಟಿ ಬೆಳೆದು ಕೊಳಚೆ ನೀರು ಸರಿಯಾಗಿ ಹರಿಯದೇ ಗಬ್ಬು ವಾಸನೆ ಬರುತ್ತಿದೆ. ಊರಿನ ಪ್ರಮುಖ ಬೀದಿಯಲ್ಲಿ ಚರಂಡಿ ಕಟ್ಟಿಕೊಂಡಿದರೂ ಸಂಬಂಧಪಟ್ಟವರು ಈ ಕಡೆ ಗಮನ ಹರಿಸದೇ ಈ ಚರಂಡಿಯ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿವೆ.<br /> <br /> ಶೌಚಾಲಯದ ಸಮಸ್ಯೆ: ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, ಅದರಲ್ಲಿ ಆರ್ಥಿಕವಾಗಿ ಚೆನ್ನಾಗಿ ಇರುವವರು ಮಾತ್ರ ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ. ಗ್ರಾಮದ ಬಹುತೇಕ ಕುಟುಂಬದವರು ಇನ್ನೂ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ ಎನ್ನುತ್ತಾರೆ ಗ್ರಾಮದ ನಿವಾಸಿ ರವಿ.<br /> <br /> ಇಲ್ಲಿನ ಬಹುತೇಕರು ತಮ್ಮ ಜಾನುವಾರುಗಳನ್ನು ಹಗಲು ಇರುಳು ಎನ್ನದೆ ಶಾಲಾ ಮೈದಾನದಲ್ಲಿ ಕಟ್ಟಿಹಾಕುವುದರಿಂದ ಶಾಲಾ ಮೈದಾನ ಹೋಗಿ ದನಗಳನ್ನು ಕಟ್ಟುವ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಇರುವ ಒಂದೇಒಂದು ಕ್ರೀಡಾಂಗಣ ಕೂಡ ಇಲ್ಲದಂತಾಗಿದೆ.<br /> <br /> ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳು ಮೂಲ ಸೌಕರ್ಯಗಳಾದ ಚರಂಡಿ, ಶೌಚಾಲಯ, ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಈ ಗ್ರಾಮ ಅಭಿವೃದ್ಧಿ ಕಾಣುವಂತೆ ಮಾಡಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಒಕ್ಕೂರಲಿನ ಕೂಗು.<br /> <br /> <strong>ಬಲಿಗೆ ಬಾಯ್ದೆರೆದ ಕೊಳವೆಬಾವಿ</strong><br /> ಕಬಳಿಗೆರೆ ಕೊಪ್ಪಲಿನ ಸಮೀದಪ ರಾಂಪುರ ಗ್ರಾಮಕ್ಕೆ 2006ರಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದರು. ಆಗ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಸಮೀಪ ಕೊಳವೆಬಾವಿ ತೆಗಸಲಾಗಿತ್ತು. ಈ ಕೊಳವೆಬಾವಿಯಲ್ಲಿ ನೀರು ಬರಲಿಲ್ಲ. ಆದರೆ, ಇಲ್ಲಿಯವರೆಗೂ ಅದನ್ನು ಮುಚ್ಚಿಲ್ಲ. ಕೊಳವೆಬಾವಿಗಳೇ ಈಚೆಗೆ ಭಾರಿ ಸುದ್ದಿ ಮಾಡುತ್ತಿದ್ದರೆ ಇಲ್ಲಿಗೆ ಯಾವ ಅಧಿಕಾರಿಯೂ ಬಂದು ನೋಡಿಲ್ಲ. ಇದರ ಹತ್ತಿರವೇ ಮಕ್ಕಳು ಆಟವಾಡುತ್ತಾರೆ ಎಂಬುದು ಇನ್ನೂ ಭಯಾನಕ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>