ತಾಲ್ಲೂಕಿನ ಶಣವಿನಕುಪ್ಪೆ, ಸಂತೆಮರೂರು, ಬಿಟ್ಟಗೋಡನಹಳ್ಳಿ, ಅತ್ನಿ, ಕೊಣನೂರು, ಕೇರಳಾಪುರ, ಮರಿತಮ್ಮನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ವಿವಿಧ ಜಾತಿಯ ಹೂಗಳನ್ನು ಬೆಳೆಯಲಾಗುತ್ತಿದೆ. ಗೌರಿ ಹಬ್ಬದ ನಂತರ ದಸರಾ, ದೀಪಾವಳಿಯವರೆಗೆ ಹೂವಿಗೆ ಸಳೀಯವಾಗಿ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ, ಹೊರ ರಾಜ್ಯಗಳ ಹಬ್ಬಗಳಿಗೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.