ಬೇಲೂರು ತಾಲ್ಲೂಕು ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿಗೆ ಆಗ್ರಹಿಸಿ ಸೆ. 4 ರಂದು ಹತ್ತು ಮಠಾಧೀಶರು ಹಾಗೂ ಸಂಘದ ಸಂಸ್ಥೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹಿರಿಯ ನಾಗರಿಕರ ವೇದಿಕೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಹಿರಿಯ ನಾಗರಿಕ ವೇದಿಕೆಯ ಮುಖಂಡರಾದ ಬಿ.ವಿ. ಕರೀಗೌಡ, ಎಂ.ಶಿವಣ್ಣ, ಜಯಲಕ್ಷ್ಮೀ ರಾಜೇಗೌಡ, ವೈ.ಎಸ್. ವೀರಭದ್ರಪ್ಪ, ಪುಟ್ಟಸ್ವಾಮಿ ಇದ್ದರು.