ಹಣದ ಆಸೆ, ಕುಟುಂಬದವರ ಹೇಳಿಕೆ ಮಾತು ಕೇಳಿ ಸೋಮಶೇಖರ್ ಎರಡು ತಿಂಗಳ ಹಿಂದೆ ಸುನಂದ ಅವರನ್ನು ತವರು ಮನೆಗೆ ಬಿಟ್ಟು ಹೋದವ ಮರಳಿ ಬಂದಿಲ್ಲ. ಎರಡು ತಿಂಗಳಿನಿಂದ ಪತಿಗಾಗಿ ಹುಡುಕಾಡಿದ ಸುನಂದ ಇದಕ್ಕೆಲ್ಲಾ ಪತಿ ಮನೆಯವರೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ಪತಿ ಮನೆಯವರು ತನಗೆ ಕೊಲೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎಚ್.ಡಿ. ರೇವಣ್ಣ ಅಭಿಮಾನಿಗಳ ಸಂಘ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸುನಂದ ಅವರ ನೇರವಿಗೆ ಧಾವಿಸಿದ್ದಾರೆ.