ಶಿಗ್ಗಾವಿ: ‘ಜನರ ಆರೋಗ್ಯಕ್ಕಾಗಿ ನಿತ್ಯ ಶ್ರಮಿಸುವ ಪೌರಕಾರ್ಮಿಕರನ್ನು ಎಲ್ಲರೂ ಪ್ರೋತ್ಸಾಹಿಸಬೇಕು. ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ದುಡಿದಿರುವ ಅವರ ಕೆಲಸ ಶ್ಲಾಘನೀಯ’ ಎಂದು ಜೆಸಿಐ ಸಂಸ್ಥೆ ಅಧ್ಯಕ್ಷ ಗುರುರಾಜ ಹುಚ್ಚಣ್ಣವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಜೆಸಿಐ ಸಂಸ್ಥೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ಗಳಾದ ಪುರಸಭೆಯ 40 ಪೌರಕಾರ್ಮಿಕರನ್ನು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಜೆಸಿಐ ಸಂಸ್ಥೆ ನಿರ್ದೇಶಕರಾದ ಡಾ.ಕುಮಾರಗೌಡ ಪಾಟೀಲ, ಶರೀಫ್ ಜಂಗ್ಲೆಪ್ಪನವರ, ಡಿ.ಆರ್.ತೋಟಿಗೇರ, ಬಿ.ಎಸ್. ಬಸರೀಕಟ್ಟಿ, ಸುರೇಶಗೌಡ ಪಾಟೀಲ, ಚನ್ನಪ್ಪ ಕೆ.ಬಿ, ಕೆ.ಎಸ್. ದಳವಾಯಿ, ಪುರಸಭೆ ಅಧಿಕಾರಿ ಶೈಲಜಾ ಪಾಟೀಲ, ಪುರಸಭೆ ಸದಸ್ಯ ಗೌಸಖಾನ್ ಮುನಸಿ, ಮಾಹಾಂತೇಶ ಮೋಟೆಬೆನ್ನೂರ ಪಾಲ್ಗೊಂಡಿದ್ದರು.