ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ: ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ

Published 23 ಏಪ್ರಿಲ್ 2023, 6:53 IST
Last Updated 23 ಏಪ್ರಿಲ್ 2023, 6:53 IST
ಅಕ್ಷರ ಗಾತ್ರ

ಹಾನಗಲ್: ಮತದಾರರು ಜಾಗೃತರಾಗಿದ್ದಾರೆ. ಅಂಗೈನಲ್ಲಿ ಅರಮನೆ ತೋರಿಸುವ ಕಾಲ ಇದಲ್ಲ ಎಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿದರು.

ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬಿಜೆಪಿ ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಹಚ್ಚುತ್ತ ಬಂದಿದೆ. ನಾವು ಅಲ್ಪಸಂಖ್ಯಾತರ ರಕ್ಷಣೆ, ಕಲ್ಯಾಣಕ್ಕೆ ಬದ್ಧರಿದ್ದೇವೆ ಎಂದರು.

ಇದಕ್ಕೂ ಮುನ್ನ ಮಲ್ಲಿಗಾರ, ಸಾತೇನಹಳ್ಳಿ, ಸಾಂವಸಗಿ, ಶರಮಾಪೂರ, ಕಾಡಶೆಟ್ಟಿಹಳ್ಳಿ, ಬೆಳಗಾಲಪೇಟೆ, ಆಲದಕಟ್ಟಿ, ಹುಣಸಿಕಟ್ಟಿ, ದ್ಯಾಮನಕೊಪ್ಪ, ರಾಮಾಪೂರ, ಮಾಸನಕಟ್ಟಿ, ಒಳಗೇರಿ, ನೀರಲಗಿ, ಮಾರನಬೀಡ, ಬಿಂಗಾಪೂರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಯಿತು.

ಇದೇ ಸಂದಭರ್ದಲ್ಲಿ ಕೆಲವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಮುಖಂಡರಾದ ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ರಾಜಶೇಖರಗೌಡ ಕಟ್ಟೆಗೌಡ್ರ, ಸೋಮಶೇಖರ ಕೊತಂಬರಿ, ಮಲ್ಲಿಕಾರ್ಜುನ ಅಂಗಡಿ, ಮಹೇಶ ಕಮಡೊಳ್ಳಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT