ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀಲರಗಿ ಮಾತನಾಡಿ, ನಗರ ಕಸ ವಿಲೇವಾರಿಗಾಗಿ 3 ಟ್ರ್ಯಾಕ್ಟರ್, 3 ಆಟೊ ಟಿಪ್ಪರ್ ಹಾಗೂ ಒಂದು ಕಸ ವಿಂಗಡನೆ ಮಿಷನ್ಗೆ ಚಾಲನೆ ನೀಡಲಾಗಿದೆ. ಅಮೃತ ನಿರ್ಮಲ ನಗರ ಯೋಜನೆಯಡಿ ₹1 ಕೋಟಿ ಅನುದಾನ ಮಂಜೂರಾಗಿದೆ. ಬರುವ ದಿನಗಳಲ್ಲಿ ₹2 ಕೋಟಿ ಅನುದಾನದಲ್ಲಿ ನೂತನ ವಾಹನ ಹಾಗೂ ಸ್ವಚ್ಛತಾ ಯಂತ್ರಗಳು ಬರಲಿವೆ ಹಾಗೂ ನಗರದಲ್ಲಿ 600 ಸಸಿಗಳನ್ನು ನೆಡಲಾಗುವುದು ಎಂದರು.