ಗುರುವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆರೋಪಗಳಿಗೆ ತಿರುಗೇಟು ನೀಡಿದರು. ‘ಪ್ರಚಾರ ಸಭೆಗಳಲ್ಲಿ ಏಕವಚನ ಸಂಬೋಧನೆ ಸಿದ್ದರಾಮ್ಯನವರ ಅಹಂಕಾರವನ್ನು ಬಿಂಬಿಸುತ್ತದೆ. ಇಂತಹ ನಡವಳಿಕೆಗಳಿಂದ ಉಪ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಕನಸಿನಲ್ಲಿದ್ದಾರೆ’ ಎಂದರು.