<p>ರಾಣೆಬೆನ್ನೂರು: ಪಾಲಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಹೆಚ್ಚಾಗಿದ್ದು, ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ವಲಸೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಾವೇರಿ ಜಿಲ್ಲೆಯ 1ರಿಂದ 5ನೇ ತರಗತಿ ವರೆಗಿನ ಎಲ್ಲಾ 1,160 ಶಾಲೆಗಳಲ್ಲಿ ದ್ವಿ ಭಾಷಾ ಮಾಧ್ಯಮ ಶಿಕ್ಷಣ ಪದ್ಧತಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.</p>.<p>ತಾಲ್ಲೂಕಿನ ಕೆರಿಮಲ್ಲಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆ, ಮುಕ್ತ ರಸ ಪ್ರಶ್ನೆ, ‘ಥಟ್ ಅಂತಾ ಹೇಳಿ ಪಟ್ ಅಂತ ಬಹುಮಾನ ಗೆಲ್ಲ’ಿ ಹಾಗೂ ದಿ. ಚನ್ನಬಸಮ್ಮ ಪಾಟೀಲ್ ದಿ. ಶಿವನಗೌಡ ಪಾಟೀಲ ಇವರ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ನಿವೃತ್ತ ಮುಖ್ಯ ಶಿಕ್ಷಕ ಆರ್ .ಎಸ್. ಪಾಟೀಲ ಮಾತನಾಡಿ, ಅಡುಗೆ ಮನೆಯಿಂದ ಅಂತರಿಕ್ಷದ ವರೆಗೂ ವಿಜ್ಞಾನ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಹೀಗಾಗಿ ಪ್ರತಿದಿನವೂ ವಿಜ್ಞಾನ ದಿನವೇ ಆಗಿದೆ ಎಂದರು.</p>.<p>ನನ್ನ ನೆಚ್ಚಿನ ವಿಜ್ಞಾನಿ ಕುರಿತ ಭಾಷಣ ಸ್ಪರ್ಧೆಯಲ್ಲಿ ತನು ಹ್ಯಾಡಲದ (ಪ್ರಥಮ), ನಮೃತ ಅಡ್ಡಂಗಡಿ (ದ್ವಿತೀಯ) ಹಾಗೂ ವಿಕಾಸ ನಿಂಗಪ್ಪ ಕಾಕೋಳ (ತೃತೀಯ) ಸ್ಥಾನ ಗಳಿಸಿ ಪ್ರಶಸ್ತಿ ಪಡೆದರು. ನಂತರ ಗಣ್ಯರು ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ಕಿರೀಟ ಧಾರಣೆ ಮಾಡಿ ಗೌರವಿಸಿದರು.</p>.<p>ನಿಖಿತಾ ಮಡಿವಾಳರ, ವಂದನಾ ಮಡಿವಾಳರ, ತಸ್ಲೀಂ ನದಾಫ್, ತಾರುಣ್ಯ ಮಾಳಗೇರ, ಭುವನ ಮಡಿವಾಳರ, ತನು ಹ್ಯಾಡಲದ, ಹರೀಶ್ ಅಡ್ಡಂಗಡಿ, ನಮ್ರತಾ ಅಡ್ಡಂಗಡಿ, ವಿಕಾಸ ಕಾಕೋಳ, ಅಭಿಲಾಷ ಪಾಟೀಲ, ತೇಜಸ್ ಅಧಿಕಾರ, ದಿವಾಕರ ಪಾಟೀಲ, ಮೋಹನಗೌಡ ಪಾಟೀಲ ಇವರು ‘ಥಟ್ ಅಂತ ಹೇಳಿ’ ಮುಕ್ತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಟ್ ಅಂತ ಬಹುಮಾನ ಪಡೆದರು.</p>.<p>ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ಮಾಳಗೇರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶಿವಕುಮಾರ , ಗ್ರಾಸಿಂನ ನಿವೃತ್ತ ವಿಜ್ಞಾನಿ ವೀರಣ್ಣ ಮುದ್ದಿಯವರ, ಹೆಚ್. ಶಿವರಾಜ, ಸುರೇಶ್ ಅಧಿಕಾರ, ಶಿಲ್ಪಾ ಶಿವಪ್ಪನವರ, ಬಸವರಾಜ್ ಅಡ್ಡಂಗಡಿ, ಚಂದ್ರಗೌಡ ಪಾಟೀಲ, ರುದ್ರಗೌಡ ಪಾಟೀಲ, ಕೊಟ್ರಪ್ಪ ಅರಬಗೊಂಡದ, ಮಹೇಶ ರಾಮಣ್ಣನವರ, ರುದ್ರಮ್ಮ ಪಾಟೀಲ, ಮುಖ್ಯಶಿಕ್ಷಕ ಪಿ. ಕೆ. ಪರಂಗಿ, ನಿರ್ಮಲಾ ಲಮಾಣಿ, ಸಿ. ಬಿ. ಸಣ್ಣಮನಿ, ವಿಜಯಲಕ್ಷ್ಮಿ ಜೋಷಿ ಇದ್ದರು.</p>
<p>ರಾಣೆಬೆನ್ನೂರು: ಪಾಲಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಹೆಚ್ಚಾಗಿದ್ದು, ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ವಲಸೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಾವೇರಿ ಜಿಲ್ಲೆಯ 1ರಿಂದ 5ನೇ ತರಗತಿ ವರೆಗಿನ ಎಲ್ಲಾ 1,160 ಶಾಲೆಗಳಲ್ಲಿ ದ್ವಿ ಭಾಷಾ ಮಾಧ್ಯಮ ಶಿಕ್ಷಣ ಪದ್ಧತಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.</p>.<p>ತಾಲ್ಲೂಕಿನ ಕೆರಿಮಲ್ಲಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆ, ಮುಕ್ತ ರಸ ಪ್ರಶ್ನೆ, ‘ಥಟ್ ಅಂತಾ ಹೇಳಿ ಪಟ್ ಅಂತ ಬಹುಮಾನ ಗೆಲ್ಲ’ಿ ಹಾಗೂ ದಿ. ಚನ್ನಬಸಮ್ಮ ಪಾಟೀಲ್ ದಿ. ಶಿವನಗೌಡ ಪಾಟೀಲ ಇವರ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ನಿವೃತ್ತ ಮುಖ್ಯ ಶಿಕ್ಷಕ ಆರ್ .ಎಸ್. ಪಾಟೀಲ ಮಾತನಾಡಿ, ಅಡುಗೆ ಮನೆಯಿಂದ ಅಂತರಿಕ್ಷದ ವರೆಗೂ ವಿಜ್ಞಾನ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಹೀಗಾಗಿ ಪ್ರತಿದಿನವೂ ವಿಜ್ಞಾನ ದಿನವೇ ಆಗಿದೆ ಎಂದರು.</p>.<p>ನನ್ನ ನೆಚ್ಚಿನ ವಿಜ್ಞಾನಿ ಕುರಿತ ಭಾಷಣ ಸ್ಪರ್ಧೆಯಲ್ಲಿ ತನು ಹ್ಯಾಡಲದ (ಪ್ರಥಮ), ನಮೃತ ಅಡ್ಡಂಗಡಿ (ದ್ವಿತೀಯ) ಹಾಗೂ ವಿಕಾಸ ನಿಂಗಪ್ಪ ಕಾಕೋಳ (ತೃತೀಯ) ಸ್ಥಾನ ಗಳಿಸಿ ಪ್ರಶಸ್ತಿ ಪಡೆದರು. ನಂತರ ಗಣ್ಯರು ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ಕಿರೀಟ ಧಾರಣೆ ಮಾಡಿ ಗೌರವಿಸಿದರು.</p>.<p>ನಿಖಿತಾ ಮಡಿವಾಳರ, ವಂದನಾ ಮಡಿವಾಳರ, ತಸ್ಲೀಂ ನದಾಫ್, ತಾರುಣ್ಯ ಮಾಳಗೇರ, ಭುವನ ಮಡಿವಾಳರ, ತನು ಹ್ಯಾಡಲದ, ಹರೀಶ್ ಅಡ್ಡಂಗಡಿ, ನಮ್ರತಾ ಅಡ್ಡಂಗಡಿ, ವಿಕಾಸ ಕಾಕೋಳ, ಅಭಿಲಾಷ ಪಾಟೀಲ, ತೇಜಸ್ ಅಧಿಕಾರ, ದಿವಾಕರ ಪಾಟೀಲ, ಮೋಹನಗೌಡ ಪಾಟೀಲ ಇವರು ‘ಥಟ್ ಅಂತ ಹೇಳಿ’ ಮುಕ್ತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಟ್ ಅಂತ ಬಹುಮಾನ ಪಡೆದರು.</p>.<p>ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ಮಾಳಗೇರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶಿವಕುಮಾರ , ಗ್ರಾಸಿಂನ ನಿವೃತ್ತ ವಿಜ್ಞಾನಿ ವೀರಣ್ಣ ಮುದ್ದಿಯವರ, ಹೆಚ್. ಶಿವರಾಜ, ಸುರೇಶ್ ಅಧಿಕಾರ, ಶಿಲ್ಪಾ ಶಿವಪ್ಪನವರ, ಬಸವರಾಜ್ ಅಡ್ಡಂಗಡಿ, ಚಂದ್ರಗೌಡ ಪಾಟೀಲ, ರುದ್ರಗೌಡ ಪಾಟೀಲ, ಕೊಟ್ರಪ್ಪ ಅರಬಗೊಂಡದ, ಮಹೇಶ ರಾಮಣ್ಣನವರ, ರುದ್ರಮ್ಮ ಪಾಟೀಲ, ಮುಖ್ಯಶಿಕ್ಷಕ ಪಿ. ಕೆ. ಪರಂಗಿ, ನಿರ್ಮಲಾ ಲಮಾಣಿ, ಸಿ. ಬಿ. ಸಣ್ಣಮನಿ, ವಿಜಯಲಕ್ಷ್ಮಿ ಜೋಷಿ ಇದ್ದರು.</p>