‘ನಗರಸಭೆಯ 91 ಪೌರಕಾರ್ಮಿಕರಲ್ಲಿ 70 ಮಂದಿಗೆ ಈಚೆಗೆ ನೇರ ವೇತನ ಪಾವತಿ ಸೌಲಭ್ಯ ದೊರೆಯಿತು. ಉಳಿದ 21 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಚಾಲಕರ ಕೊರತೆ ಕಾಡುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಹರಡಿತ್ತು. ಆದ ಕಾರಣ ನಾನೇ ಟ್ರಾಕ್ಟರ್ ಚಾಲನೆ ಮಾಡಿ ಕಸ ವಿಲೇವಾರಿ ಮಾಡಿದೆ’ ಎಂದು ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ತಿಳಿಸಿದರು.