ಈ ಸಮುದಾಯದವರಿಗೆ ಪಡಿತರ ಚೀಟಿ ಹೊರತುಪಡಿಸಿ ಬೇರೆ ಯಾವ ಸೌಕರ್ಯಗಳೂ ತಲುಪಿಲ್ಲ. ಆದರೆ, ಜನಪ್ರತಿನಿಧಿಗಳು ಮತಗಳಿಗಾಗಿ ಇವರಿಗೆಲ್ಲ ಮತದಾನದ ಗುರುತಿನ ಚೀಟಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಇವರ ಬಳಿ ಬಂದು ಹೋದರೆ, ಮತ್ತೆ ಈ ಕಡೆ ಸುಳಿಯುತ್ತಿಲ್ಲ. ‘ನೆರೆ ಬಂತೆಂದು ಊರೆಲ್ಲ ಅಡ್ಡಾಡುತ್ತಿದ್ದಾರೆ. ನಮ್ಮ ಕಡೆ ಒಬ್ಬರೂ ಬಂದಿಲ್ಲ’ ಎನ್ನುತ್ತಾರೆ ಈ ಸಂತ್ರಸ್ತರು.