<p><strong>ಹಾವೇರಿ: ನ</strong>ಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕಾಗಿ ಹಾಕಿರುವ ಪೆಂಡಾಲ್ ಗಾಳಿಗೆ ಕಳಚಿಬಿದ್ದು, ಕಬ್ಬಿಣದ ಕಂಬಗಳು ಬಡಿದು ವ್ಯಕ್ತಿಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.</p><p>ನಗರದ ಹೊರವಲಯದ ಅಜ್ಜಯ್ಯ ಸ್ವಾಮಿ ದೇವಸ್ಥಾನ ಬಳಿ ದೊಡ್ಡ ಮಟ್ಟದಲ್ಲಿ ಶಾಮಿಯಾನ ಹಾಗೂ ವೇದಿಕೆ ನಿರ್ಮಾಣ ಮಾಡಲಾಗಿದೆ.</p><p>ಅದರ ವೀಕ್ಷಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕರು ಗುರುವಾರ ಭೇಟಿ ನೀಡಿದ್ದ ವೇಳೆಯಲ್ಲಿಯೇ ಗಾಳಿಗೆ ಪೆಂಡಾಲ್ ಹಾರಿ ಬಿದ್ದಿದೆ.</p><p>ಇದೇ ಸಂದರ್ಭದಲ್ಲಿ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. </p><p>ಸಚಿವರು ಹಾಗೂ ಶಾಸಕರ ಎದುರೇ ಪೆಂಡಾಲ್ ಕಳಚಿ ಬಿದ್ದಿದ್ದು, ಎಲ್ಲರೂ ಕೆಲ ನಿಮಿಷ ಕಕ್ಕಾಪಿಕ್ಕಿಯಾದರು ಕೆಲವರು, ಸ್ಥಳದಿಂದ ಓಡಿದರು. ಇದೇ ಸಂದರ್ಭದಲ್ಲಿಯೇ ಮಲ್ಲೇಶ ತಲೆಗೆ ಕಬ್ಬಿಣ ಬಿದ್ದು, ಗಾಯವಾಗಿ ರಕ್ತ ಸೋರುತ್ತಿತ್ತು.</p><p>ಗಾಯಗೊಂಡ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. </p><p>ಊಟದ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಪೆಂಡಾಲ್ ಹಾಕಿರುವುದೇ ಅವಘಡಕ್ಕೆ ಕಾರಣವೆಂಬ ಆರೋಪ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: ನ</strong>ಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕಾಗಿ ಹಾಕಿರುವ ಪೆಂಡಾಲ್ ಗಾಳಿಗೆ ಕಳಚಿಬಿದ್ದು, ಕಬ್ಬಿಣದ ಕಂಬಗಳು ಬಡಿದು ವ್ಯಕ್ತಿಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.</p><p>ನಗರದ ಹೊರವಲಯದ ಅಜ್ಜಯ್ಯ ಸ್ವಾಮಿ ದೇವಸ್ಥಾನ ಬಳಿ ದೊಡ್ಡ ಮಟ್ಟದಲ್ಲಿ ಶಾಮಿಯಾನ ಹಾಗೂ ವೇದಿಕೆ ನಿರ್ಮಾಣ ಮಾಡಲಾಗಿದೆ.</p><p>ಅದರ ವೀಕ್ಷಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕರು ಗುರುವಾರ ಭೇಟಿ ನೀಡಿದ್ದ ವೇಳೆಯಲ್ಲಿಯೇ ಗಾಳಿಗೆ ಪೆಂಡಾಲ್ ಹಾರಿ ಬಿದ್ದಿದೆ.</p><p>ಇದೇ ಸಂದರ್ಭದಲ್ಲಿ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. </p><p>ಸಚಿವರು ಹಾಗೂ ಶಾಸಕರ ಎದುರೇ ಪೆಂಡಾಲ್ ಕಳಚಿ ಬಿದ್ದಿದ್ದು, ಎಲ್ಲರೂ ಕೆಲ ನಿಮಿಷ ಕಕ್ಕಾಪಿಕ್ಕಿಯಾದರು ಕೆಲವರು, ಸ್ಥಳದಿಂದ ಓಡಿದರು. ಇದೇ ಸಂದರ್ಭದಲ್ಲಿಯೇ ಮಲ್ಲೇಶ ತಲೆಗೆ ಕಬ್ಬಿಣ ಬಿದ್ದು, ಗಾಯವಾಗಿ ರಕ್ತ ಸೋರುತ್ತಿತ್ತು.</p><p>ಗಾಯಗೊಂಡ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. </p><p>ಊಟದ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಪೆಂಡಾಲ್ ಹಾಕಿರುವುದೇ ಅವಘಡಕ್ಕೆ ಕಾರಣವೆಂಬ ಆರೋಪ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>