ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಅಧಿಕಾರಿಗಳ ಸಭೆ ನಡೆಸಿ ಲೆಕ್ಕ ತೆಗೆದುಕೊಳ್ಳಬಹುದು. ಆದರೆ, ಅವರಿಗೆ ಆರೋಪದಲ್ಲಿ ಇರುವ ಆಸಕ್ತಿ, ಲೆಕ್ಕ ನೋಡುವುದರಲ್ಲಿ ಇಲ್ಲ.ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ₹2,300 ಕೋಟಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸುತ್ತಾರೆ. ಆದರೆ, ಸರ್ಕಾರ 4 ತಿಂಗಳಲ್ಲಿ ಖರ್ಚು ಮಾಡಿರುವುದೇ ₹560 ಕೋಟಿ ಎಂದು ಹೇಳಿದರು.