ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಮಹಿಳಾ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಪ್ರಕರಣ ಕೂಲಂಕಶವಾಗಿ ಪರಿಶೀಲನೆ ನಡೆಸಿ, ಒಟ್ಟು ವೆಚ್ಚ ₹ 1.77 ಲಕ್ಷವನ್ನು ಶೇ 6ರಂತೆ ಬಡ್ಡಿ ಸಹಿತ ದೂರು ದಾಖಲಾದ ದಿನದಿಂದ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಅವರ ಮಾನಸಿಕ ವ್ಯಥೆ ಮತ್ತು ಪ್ರಕರಣದ ಖರ್ಚಿನ ಪರಿಹಾರವಾಗಿ ₹ 5 ಸಾವಿರವನ್ನು ಕಾರಿನ ಮಾಲೀಕನಿಗೆ 30 ದಿನದೊಳಗಾಗಿ ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶ ನೀಡಿದ್ದಾರೆ.