‘ಈ ಪುರಾತನ ಶ್ರೀರಾಮ ದೇವಸ್ಥಾನ 138 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿಯ ವಿಗ್ರಹಗಳಿವೆ. ಬೆಳಿಗ್ಗೆ 6ರಿಂದಲೇ ಭಕ್ತರು ದೇಗುಲಕ್ಕೆ ಬಂದು ಅರ್ಚನೆ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ಯುಗಾದಿ ಹಬ್ಬದಿಂದ ಒಟ್ಟು 8 ದಿನ (ಮಾರ್ಚ್ 31ರವರೆಗೆ) ನಿತ್ಯ ಸಂಜೆ 8 ಗಂಟೆಗೆ ಮಹಾಮಂಗಳಾರತಿ, ಅಷ್ಟಾವಧಾನ, ಪ್ರಸಾದ ವಿನಿಯೋಗ ನಡೆಯುತ್ತಿದೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ ನಡೆಯಲಿದೆ’ ಎಂದು ಶ್ರೀರಾಮ ದೇವಸ್ಥಾನದ ಸೇವಾಕರ್ತ ಹನುಮಂತನಾಯಕ ಬಾದಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.