‘ಬ್ರಾಹ್ಮಣ್ಯ ಮತ್ತು ವೈದಿಕಶಾಹಿಯನ್ನು ‘ಹಿಂದೂ ಧರ್ಮ’ ಎಂದು ಬಿಂಬಿಸಿರುವುದು ತಂತ್ರಗಾರಿಕೆ. ಹಿಂದೂ ಧರ್ಮ ಎನ್ನುವುದೇ ಇಲ್ಲ. ಅದೊಂದು ಸಂಸ್ಕೃತಿ, ಪರಂಪರೆ, ಪ್ರಾದೇಶಿಕತೆಯ ಅಸ್ಮಿತೆ. ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪೂರಕ ಉಲ್ಲೇಖಗಳಿವೆ’ ಎಂದ ಅವರು, ‘ಮಾನ್ಯತೆ ಪಡೆದರೆ, ರಾಷ್ಟ್ರ ಧರ್ಮ ಆಗಿ ಪರಿವರ್ತನೆಗೊಳ್ಳಲಿರುವ ಏಕೈಕ ಧರ್ಮವೇ ಲಿಂಗಾಯತ’ ಎಂದರು.