ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ರೈತರು ಹತ್ತಿ, ತೊಗರಿ ಬಿಟ್ಟು ಶುಂಠಿ ಬೆಳೆದಿದ್ದಾರೆ. ಮಾಣಶಿವಣಗಿಯಲ್ಲಿ ಮಾಳಪ್ಪ ಪೂಜಾರಿ ಚೌದ್ರಿ 2 ಎಕರೆ, ಅಣ್ಣಪ್ಪ 2 ಎಕರೆ, ಅಮಯೋಗಪ್ಪ ಚೌದ್ರಿ 7 ಎಕರೆ, ಸತ್ಯಪ್ಪ ನಾಯ್ಕೋಡಿ 1 ಎಕರೆ, ಪಂಡಿತ ಸಾಹು ಕುಡಿ ಎರಡುವರೆ ಎಕರೆ, ಮಹಾದೇವಪ್ಪ ಚೌದ್ರಿ 1 ಎಕರೆ, ಮಲ್ಲಿಕ್ ಸಾಬ 1 ಎಕರೆ, ಪರಸುರಾಮ ಯಲ್ಲಪ್ಪ 1 ಎಕರೆ, ರಜಕ್ ಸಾಬ 1 ಎಕರೆ, ಕಾಂತಪ್ಪ ಶಿವಶರಣಪ್ಪ 1 ಎಕರೆ, ಸುಂಬಡ ಗ್ರಾಮದ ದೇವಪ್ಪ ಶರಣಪ್ಪ ಒಂದೂವರೆ ಎಕರೆ ಸೇರಿದಂತೆ ಎರಡು ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಎಕರೆ ಶುಂಠಿ ಹಾನಿಯಾಗಿದೆ.