ತಾಲ್ಲೂಕಿನ ಮರಕಲ್, ಬಿರನೂರ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಭತ್ತದ ನೆಲಕ್ಕೆ ಬಿದ್ದಿರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೆ ಹತ್ತಿ ಬೆಳೆದ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಸದ್ಯ ಬೆಳೆ ಹಾನಿಯ ಬಗ್ಗೆ ನಿಖರವಾಗಿ ಮಾಹಿತಿ ಇಲ್ಲ. ತಾಲ್ಲೂಕಿನಲ್ಲಿ ಮಳೆ ಮಾಪನದಲ್ಲಿ ದಾಖಲಾಗಿರುವ ವಿವರದಂತೆ ಶಹಾಪುರ 16 ಮಿ.ಮೀ, ಭೀಮರಾಯನಗುಡಿ 17, ಗೋಗಿ 10, ದೋರನಹಳ್ಳಿ 14, ಹಯ್ಯಾಳ 14, ವಡಗೇರಾ 56, ಹತ್ತಿಗೂಡೂರ 13 ಮಿ.ಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗೌತಮ ವಾಗ್ಮೋರೆ ತಿಳಿಸಿದರು.