ಬೀದರ್ನಿಂದ ಕಲಬುರ್ಗಿ ಬರುತ್ತಿದ್ದಾಗ ರಸ್ತೆ ಬದಿಯ ಮರಕ್ಕೆ ವಾಹನ ಅಪ್ಪಳಿಸಿದೆ. ವಾಹನದಲ್ಲಿ ಇದ್ದ ಕುಶಾಲ ರಾಜೇಂದ್ರ ಚಿಂಚೋಳಿಕರ್, ರಾಜು ಗುರುನಾಥ ಸೊನ್ನದ್ ಹಾಗೂ ಶಿವಕುಮಾರ ಮಾಹಾಂತಯ್ಯ ಗುತ್ತೇದಾರ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಎಸ್ಐ ಪರಶುರಾಮ ತಿಳಿಸಿದ್ದಾರೆ.