<p><strong>ಕಲಬುರ್ಗಿ: </strong>ಇಲ್ಲಿಯ ಅಮೃತಸರೋವರ ಪರಿಸರ ಸ್ನೇಹಿ ತಾಣವಾಗಿದ್ದು, ಮೌಂಟ್ ಅಬು ಕ್ಷೇತ್ರವೇ ಇಲ್ಲಿ ತಲೆ ಎತ್ತಿದಂತೆ ಅನುಭವವಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.</p>.<p>ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಸ್ಥಾಪಕ ಬ್ರಹ್ಮಬಾಬಾ ಅವರ 52ನೇ ಸ್ಮೃತಿ ದಿನದ ಅಂಗವಾಗಿ ಸೋಮವಾರ ಸಂಜೆ ಇಲ್ಲಿಯ ಸೇಡಂ ರಸ್ತೆಯ ಅಮೃತ ಸರೋವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅಮೃತಸರೋವರ ಪರಿಸರದಲ್ಲಿ ಬರುತ್ತಿದ್ದಂತೆ ಮನಸ್ಸಿಗೆ ಶಾಂತಿ ಲಭಿಸಿದ ಅನುಭೂತಿಯಾಗುತ್ತದೆ.ಇಲ್ಲಿಯ ಸಹೋದರ–ಸಹೋದರಿಯರ ನಿಸ್ವಾರ್ಥ ಸೇವೆಯಿಂದಾಗಿ ಕಲಬುರ್ಗಿ ಅಷ್ಟೇ ಅಲ್ಲದೆ ಸುತ್ತಲಿನ ಪ್ರದೇಶಗಳ ಜನರಿಗೆ ಇದು ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಇಲ್ಲಿ ಹೊಸದಾಗಿ ಆರಂಭಿಸಿರುವ ಧ್ವನಿ–ಬೆಳಕಿನ ಶೋ ಬಹಳ ಸುಂದರವಾಗಿದ್ದು, ಅಧ್ಯಾತ್ಮದ ಜ್ಞಾನ ನೀಡುತ್ತದೆ. ಬ್ರಹ್ಮಬಾಬಾ ಅವರ ಸೃತಿದಿವಸದ ಅಂಗವಾಗಿ ನಿರ್ಮಿಸಿದ ಶಾಂತಿ ಸ್ಥಂಬ ಎಲ್ಲರಿಗೂ ಆತ್ಮದ ಅಮರತ್ವದ ಅನುಭವ ಮಾಡುತ್ತಿದೆ. ಹೆಚ್ಚು ಹೆಚ್ಚು ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.</p>.<p>ಕಲಬುರ್ಗಿ ಉಪವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆಬಿ.ಕೆ. ವಿಜಯಾದೀದಿ ಅವರು, ‘ಸಾತ್ವಿಕ ವ್ಯಕ್ತಿತ್ವದ ಶಾಸಕ ದತ್ತಾತ್ರೇಯ ಅವರಿಗೆ ಇನ್ನಷ್ಟು ಉನ್ನತ ಹುದ್ದೆ ಲಭಿಸಿ, ಈ ಭಾಗದ ಜನರಿಗೆ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿದೆ’ ಎಂದರು.</p>.<p>ಬ್ರಹ್ಮಕುಮಾರಿ ಸಂಸ್ಥೆಯ ಸಮಾಜಸೇವಾ ಪ್ರಭಾಗದ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಬಿ.ಕೆ. ಪ್ರೇಮಣ್ಣ ಅವರು, ‘ವ್ಯಕ್ತಿಯ ಗುಣ ಸ್ವಭಾವವೇ ಅವರನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ವಿನಯಶೀಲರಾಗಿ ಸೇವೆ ಮಾಡುತ್ತಿರುವ ದತ್ತಾತ್ರೇಯ ಪಾಟೀಲರುಮಾದರಿಯ ವ್ಯಕ್ತಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಬಿಜೆಪಿ ಯುವ ಮೋರ್ಚಾ ನಗರ ಘಟಕದ ಕಾರ್ಯದರ್ಶಿ ಉದಯಕುಮಾರ ರೇಷ್ಮೆ, ಬಿ.ಕೆ ಶರಣಬಸವ ಹೀರಾ, ಆದರ್ಶನಗರ ಕೇಂದ್ರದ ಪ್ರಭಾರಿ ಬಿ.ಕೆ. ದಾನೇಶ್ವರಿ, ಅಮೃತಸರೋವರ ರಿಟ್ರೀಟ್ ಸೆಂಟರ್ನ ಪ್ರಭಾರಿ ಬಿ.ಕೆ. ಶಿವಲೀಲಾ ಉಪಸ್ಥಿತರಿದ್ದರು ಎಂದು ಬಿ.ಕೆ ಸವಿತಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಇಲ್ಲಿಯ ಅಮೃತಸರೋವರ ಪರಿಸರ ಸ್ನೇಹಿ ತಾಣವಾಗಿದ್ದು, ಮೌಂಟ್ ಅಬು ಕ್ಷೇತ್ರವೇ ಇಲ್ಲಿ ತಲೆ ಎತ್ತಿದಂತೆ ಅನುಭವವಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.</p>.<p>ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಸ್ಥಾಪಕ ಬ್ರಹ್ಮಬಾಬಾ ಅವರ 52ನೇ ಸ್ಮೃತಿ ದಿನದ ಅಂಗವಾಗಿ ಸೋಮವಾರ ಸಂಜೆ ಇಲ್ಲಿಯ ಸೇಡಂ ರಸ್ತೆಯ ಅಮೃತ ಸರೋವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅಮೃತಸರೋವರ ಪರಿಸರದಲ್ಲಿ ಬರುತ್ತಿದ್ದಂತೆ ಮನಸ್ಸಿಗೆ ಶಾಂತಿ ಲಭಿಸಿದ ಅನುಭೂತಿಯಾಗುತ್ತದೆ.ಇಲ್ಲಿಯ ಸಹೋದರ–ಸಹೋದರಿಯರ ನಿಸ್ವಾರ್ಥ ಸೇವೆಯಿಂದಾಗಿ ಕಲಬುರ್ಗಿ ಅಷ್ಟೇ ಅಲ್ಲದೆ ಸುತ್ತಲಿನ ಪ್ರದೇಶಗಳ ಜನರಿಗೆ ಇದು ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಇಲ್ಲಿ ಹೊಸದಾಗಿ ಆರಂಭಿಸಿರುವ ಧ್ವನಿ–ಬೆಳಕಿನ ಶೋ ಬಹಳ ಸುಂದರವಾಗಿದ್ದು, ಅಧ್ಯಾತ್ಮದ ಜ್ಞಾನ ನೀಡುತ್ತದೆ. ಬ್ರಹ್ಮಬಾಬಾ ಅವರ ಸೃತಿದಿವಸದ ಅಂಗವಾಗಿ ನಿರ್ಮಿಸಿದ ಶಾಂತಿ ಸ್ಥಂಬ ಎಲ್ಲರಿಗೂ ಆತ್ಮದ ಅಮರತ್ವದ ಅನುಭವ ಮಾಡುತ್ತಿದೆ. ಹೆಚ್ಚು ಹೆಚ್ಚು ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.</p>.<p>ಕಲಬುರ್ಗಿ ಉಪವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆಬಿ.ಕೆ. ವಿಜಯಾದೀದಿ ಅವರು, ‘ಸಾತ್ವಿಕ ವ್ಯಕ್ತಿತ್ವದ ಶಾಸಕ ದತ್ತಾತ್ರೇಯ ಅವರಿಗೆ ಇನ್ನಷ್ಟು ಉನ್ನತ ಹುದ್ದೆ ಲಭಿಸಿ, ಈ ಭಾಗದ ಜನರಿಗೆ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿದೆ’ ಎಂದರು.</p>.<p>ಬ್ರಹ್ಮಕುಮಾರಿ ಸಂಸ್ಥೆಯ ಸಮಾಜಸೇವಾ ಪ್ರಭಾಗದ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಬಿ.ಕೆ. ಪ್ರೇಮಣ್ಣ ಅವರು, ‘ವ್ಯಕ್ತಿಯ ಗುಣ ಸ್ವಭಾವವೇ ಅವರನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ವಿನಯಶೀಲರಾಗಿ ಸೇವೆ ಮಾಡುತ್ತಿರುವ ದತ್ತಾತ್ರೇಯ ಪಾಟೀಲರುಮಾದರಿಯ ವ್ಯಕ್ತಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಬಿಜೆಪಿ ಯುವ ಮೋರ್ಚಾ ನಗರ ಘಟಕದ ಕಾರ್ಯದರ್ಶಿ ಉದಯಕುಮಾರ ರೇಷ್ಮೆ, ಬಿ.ಕೆ ಶರಣಬಸವ ಹೀರಾ, ಆದರ್ಶನಗರ ಕೇಂದ್ರದ ಪ್ರಭಾರಿ ಬಿ.ಕೆ. ದಾನೇಶ್ವರಿ, ಅಮೃತಸರೋವರ ರಿಟ್ರೀಟ್ ಸೆಂಟರ್ನ ಪ್ರಭಾರಿ ಬಿ.ಕೆ. ಶಿವಲೀಲಾ ಉಪಸ್ಥಿತರಿದ್ದರು ಎಂದು ಬಿ.ಕೆ ಸವಿತಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>