ನಂತರ ಗೋದುತಾಯಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮಸೇನೆ ರಾಜ್ಯ ಅಧ್ಯಕ್ಷರೂ ಆಗಿರುವ, ಅಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಪೌರತ್ವ ಕಾಯ್ದೆಯನ್ನು ರಾಷ್ಟ್ರದ ರಕ್ಷಣೆಯ ಸಲುವಾಗಿ ಜಾರಿಗೆ ತರಲಾಗಿದೆ. ಹೀಗಾಗಿ ಜಿಲ್ಲೆಯ ಮಠಾಧೀಶರು ಇದನ್ನು ಸ್ವಾಗತಿಸುತ್ತೇವೆ. ಇದನ್ನುವಿರೋಧಿಸಿ ದೇಶದ ಹಲವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಮತಾಂಧರು ಪ್ರತಿಭಟನೆ ನಡೆಸಿದರು.ಈ ಎಲ್ಲ ಗಲಭೆಗಳ ಹಿಂದೆ ಪಾಕಿಸ್ತಾನದ ಕುತಂತ್ರ ಇದೆ ಎಂಬುದು ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.