ಕೂಡಲೇ ಎಲ್ಲಾ ಕಾರ್ಯಕರ್ತೆಯರಿಗೆ ಅಗತ್ಯವಿರುವ ಎಲ್ಲಾ ಸುರಕ್ಷಾ ಸಾಮಗ್ರಿಗಳು, ವಿಶೇಷ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಹಾಗೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಸಂಘಟನಾಕಾರರಾದ ವಿ.ಜಿ.ದೇಸಾಯಿ, ಎಸ್.ಎಂ. ಶರ್ಮಾ, ಭಾಗಣ್ಣ ಬುಕ್ಕಾ, ರಾಧಾ, ಜಯಶ್ರೀ ಸರ್ಕಾರವನ್ನು ಒತ್ತಾಯಿಸಿದರು.