ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿ ಯುವಕರು ಪೋಲಿಸ್ ಕಾನ್ಸ್ಟೆಬಲ್ ಗಣಪತರಾವ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಗಣಪತರಾವ್ ಅವರ ಕೈ, ಕಣ್ಣು ಮತ್ತು ಮೈಮೇಲೆ ಗಾಯಗಳಾಗಿವೆ. ನಂತರ ಸ್ಥಳಕ್ಕೆ ಪೋಲಿಸ್ ವಾಹನ ಬಂದಾಗ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಹಾಗೂ ಕರ್ತವ್ಯ ನಿರತ ಪೋಲಿಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ಆರೋಪದಡಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಕೊಡಲ ಹಂಗರಗಾ ಸಮೀಪದ ನಿಪ್ಪಾಣಿ ತಾಂಡಾದ ನಿವಾಸಿಗಳಾಗಿದ್ದಾರೆ.