ಕಾಳಗಿ: ಕೊರೊನಾ ಹಿನ್ನೆಲೆಯಲ್ಲಿ ಅ.21ರಂದು ನಡೆಯಬೇಕಿದ್ದ ಭರತನೂರ ವಿರಕ್ತ ಮಠದ ಮೂಲ ಕರ್ತೃ ಗುರುನಂಜೇಶ್ವರರ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಜಾತ್ರೆ ರದ್ದುಪಡಿಸಲಾಗಿದೆ. ಭಕ್ತರು ಅಂದು ತಮ್ಮ ಮನೆಯಲ್ಲೆ ಗುರುನಂಜೇಶ್ವರರ ನಾಮಸ್ಮರಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.