ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ ಬುಧವಾರ ಸಂಜೆ ಜರುಗಿತು.
ಪಲ್ಲಕ್ಕಿ ಮೆರವಣಿಗೆ ಜತೆಗೆ ಕುಂಭ ಹೊತ್ತು ಗ್ರಾಮದ ಮುಖ್ಯ ಬೀದಿ ಮೂಲಕ ದೇವಾಲಯ ಎದುರಿನ ಮುಲ್ಲಾಮಾರಿ ನದಿಗೆ ಬಂದು ತಲುಪಿತು. ಪಲ್ಲಕ್ಕಿ 5 ಸುತ್ತು ಹಾಕಿ ಪಟಾಕಿ ಸಿಡಿಸಿದ ನಂತರ ಸಂಜೆ 7 ಗಂಟೆಗೆ ರಥೋತ್ಸವ ಜರುಗಿತು.
5 ದಿನ ಪಲ್ಲಕ್ಕಿ ಮೆರವಣಿಗೆ ನಡೆಸಿದ ಭಕ್ತರು, ಬುಧವಾರ ಬೆಳಿಗ್ಗೆ ಉಚ್ಚಾಯಿ ಮೆರವಣಿಗೆ ನಡೆಸಿ ಕೆಂಡ ಕಾಯ್ದು ಹರಕೆ ತೀರಿಸಿದರು. ಸಂಜೆಗೆ ಧಾರ್ಮಿಕ ಕೈಂಕರ್ಯ ಪೂರೈಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರಗಿತು.