ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ- ಸಾವು

Published 3 ಫೆಬ್ರುವರಿ 2024, 15:56 IST
Last Updated 3 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಚಿಂಚೋಳಿ: ಜಗಳ ಬಿಡಿಸಿಲು ಹೋಗಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

‘ಶಿವಕುಮಾರ ಅಂಜಣ್ಣ ಗಾರಲೋರ(25) ಅವರನ್ನು ಚಂದ್ರಕಾಂತ ಅಲಿಯಾಸ್ ಮುರುಳಿ ದಾಸನೋರ್ ಮತ್ತು ಬಸವರಾಜ ಪಂಡರಿ ದೊಡ್ಡನೋರ್ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಗ್ರಾಮದ ಹನುಮಾನ ಮಂದಿರ ಎದುರು ರಸ್ತೆಯಲ್ಲಿ ಶುಕ್ರವಾರ ಚಂದ್ರಕಾಂತ(ಮುರುಳಿ), ಬಸವರಾಜ ದೊಡ್ಡನೋರ್ ತನ್ನ ಮಗ ಶಿವಕುಮಾರನಿಗೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಶಿವಕುಮಾರ ಮನೆಗೆ ತೆರಳಿ ಮಲಗಿದ್ದ. ಬೆಳಿಗ್ಗೆ ಎಬ್ಬಿಸಿದರೆ ಎಳಲಿಲ್ಲ’ ಎಂದು ತಾಯಿ ಪದ್ಮಾವತಿ ಅಂಜಣ್ಣ ಗಾರಲೋರ್ ಚಿಂಚೋಳಿ ಠಾಣೆಗೆ ದೂರು ನೀಡಿದ್ದಾರೆ.

ಸಬ್ಇನ್‌ಸ್ಪೆಕ್ಟರ್ ರಾಚಯ್ಯ ಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಂಗಮನಾಥ ಹಿರೇಮಠ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT