ಚಿತ್ತಾಪುರದಿಂದ ಕಲಬುರಗಿ ನಗರಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ನಲ್ಲಿ ಪ್ರಯಾಣಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ವೇಗವಾಗಿ ಚಲಿಸುತ್ತಿದ್ದ ಬಸ್ ಬಲಕ್ಕೆ ರಸ್ತೆಯ ಕೆಳಗಿಳಿದು ಹೊಲಕ್ಕೆ ನುಗ್ಗಿದೆ. ಮಳೆಯಿಂದ ಜಮೀನು ಕೆಸರು ಗದ್ದೆಯಂತ್ತಾಗಿ ಬಸ್ಸಿನ ಚಕ್ರಗಳು ಮುಂದಕ್ಕೆ ಚಲಿಸದಂತ್ತಾಗಿ ನಿಂತಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.