<p><strong>ಕಲಬುರ್ಗಿ:</strong> 2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಗರದಲ್ಲಿ ಭಾನುವಾರ ವಿವಿಧ ಯುವ ಸಂಘಟನೆಗಳ ಮುಖಂಡರು ಪಂಥ ಸಂಚಲನ, ಮೇಣದಬತ್ತಿ ಮೆರವಣಿಗೆ ನಡೆಸಿದರು.</p>.<p>ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಶಾಂತಿ ಮೆರವಣಿಗೆ ನಡೆಸಿದ ಪ್ರೇರಣಾ ತಂಡದ ಸದಸ್ಯರು, ವೃತ್ತದಲ್ಲಿ ಯೋಧರಿಗೆ ಗೌರವ ಸಲ್ಲಿಸಿದರು.</p>.<p>ಸಂಘಟನೆ ಅಧ್ಯಕ್ಷೆ ರಕ್ಷಿತಾ ಲಾಡವಂತಿ, ಮುಖಂಡರಾದ ಮಹಾದೇವ ಚವ್ಹಾಣ, ಮಹೇಶ ಬಿದರ್ಕರ್, ಮಾಲಾ ದಣ್ಣೂರ, ಹರೀಶ ಹಾಲು, ರಾಹುಲ ಕುಲಕರ್ಣಿ, ಮಹಾದೇವ ಮಾದುಗೋಳಕರ್, ಪ್ರವೀಣ, ಶ್ವೇತಾ, ಸುಧಾಕರ್, ಮಹೇಶ, ಅಜಿತ್ ಜಾಧವ ನೇತೃತ್ವ ವಹಿಸಿದ್ದರು.</p>.<p class="Subhead">ಕೆಸರಟಗಿಯಲ್ಲಿ ಶ್ರದ್ಧಾಂಜಲಿ: ನಗರ ಹೊರವಲಯದ ಕೆಸರಟಗಿಯಲ್ಲಿ ಕಲ್ಯಾಣ ಕರ್ನಾಟಕ ಸೇನೆ ಹಾಗೂ ಕರ್ನಾಟಕ ಕಾರ್ಮಿಕ ಸೇನೆ ವತಿಯಿಂದ ಭಾನುವಾರ, ಪುಲ್ವಾಮಾ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಎರಡು ನಿಮಿಷ ಮೌನಾಚರಣೆ ಮಾಡಿದ ಕೆಸರಟಗಿ ಗ್ರಾಮಸ್ಥರು ಹಾಗೂ ಸ್ಲಂ ಬೋರ್ಡ್ ಮನೆಗಳ ನಿವಾಸಿಗಳು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿದರು.</p>.<p>ಪ್ರಮುಖರಾದ ರಾಜಕುಮಾರ ಬಿ. ಸಿರನೂರ, ಬಸವರಾಜ, ಮಲ್ಲು ಕಟ್ಟಿಮನಿ, ಅಬ್ದುಲ್ ಜಾವೀದ್, ಜಾವೀದ್ ಖಾನ್, ಪರಜಾನಾ ಬೇಗಂ, ದತ್ತು ಹಯ್ಯಾಳಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> 2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಗರದಲ್ಲಿ ಭಾನುವಾರ ವಿವಿಧ ಯುವ ಸಂಘಟನೆಗಳ ಮುಖಂಡರು ಪಂಥ ಸಂಚಲನ, ಮೇಣದಬತ್ತಿ ಮೆರವಣಿಗೆ ನಡೆಸಿದರು.</p>.<p>ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಶಾಂತಿ ಮೆರವಣಿಗೆ ನಡೆಸಿದ ಪ್ರೇರಣಾ ತಂಡದ ಸದಸ್ಯರು, ವೃತ್ತದಲ್ಲಿ ಯೋಧರಿಗೆ ಗೌರವ ಸಲ್ಲಿಸಿದರು.</p>.<p>ಸಂಘಟನೆ ಅಧ್ಯಕ್ಷೆ ರಕ್ಷಿತಾ ಲಾಡವಂತಿ, ಮುಖಂಡರಾದ ಮಹಾದೇವ ಚವ್ಹಾಣ, ಮಹೇಶ ಬಿದರ್ಕರ್, ಮಾಲಾ ದಣ್ಣೂರ, ಹರೀಶ ಹಾಲು, ರಾಹುಲ ಕುಲಕರ್ಣಿ, ಮಹಾದೇವ ಮಾದುಗೋಳಕರ್, ಪ್ರವೀಣ, ಶ್ವೇತಾ, ಸುಧಾಕರ್, ಮಹೇಶ, ಅಜಿತ್ ಜಾಧವ ನೇತೃತ್ವ ವಹಿಸಿದ್ದರು.</p>.<p class="Subhead">ಕೆಸರಟಗಿಯಲ್ಲಿ ಶ್ರದ್ಧಾಂಜಲಿ: ನಗರ ಹೊರವಲಯದ ಕೆಸರಟಗಿಯಲ್ಲಿ ಕಲ್ಯಾಣ ಕರ್ನಾಟಕ ಸೇನೆ ಹಾಗೂ ಕರ್ನಾಟಕ ಕಾರ್ಮಿಕ ಸೇನೆ ವತಿಯಿಂದ ಭಾನುವಾರ, ಪುಲ್ವಾಮಾ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಎರಡು ನಿಮಿಷ ಮೌನಾಚರಣೆ ಮಾಡಿದ ಕೆಸರಟಗಿ ಗ್ರಾಮಸ್ಥರು ಹಾಗೂ ಸ್ಲಂ ಬೋರ್ಡ್ ಮನೆಗಳ ನಿವಾಸಿಗಳು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿದರು.</p>.<p>ಪ್ರಮುಖರಾದ ರಾಜಕುಮಾರ ಬಿ. ಸಿರನೂರ, ಬಸವರಾಜ, ಮಲ್ಲು ಕಟ್ಟಿಮನಿ, ಅಬ್ದುಲ್ ಜಾವೀದ್, ಜಾವೀದ್ ಖಾನ್, ಪರಜಾನಾ ಬೇಗಂ, ದತ್ತು ಹಯ್ಯಾಳಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>