<p><strong>ಅಫಜಲಪುರ;</strong> ತಾಲೂಕಿನ ಅತನೂರು ಗ್ರಾಮದಲ್ಲಿ ಗುರುವಾರ ಅಡುಗೆ ಅನಿಲ ಸೋರಿಕೆಯಾಗಿ ಇಡೀ ಮನೆ ಸುಟ್ಟು ಸುಮಾರು ₹ 5 ಲಕ್ಷ ಹಾನಿಯಾದ ಬಗ್ಗೆ ವರದಿಯಾಗಿದೆ.</p>.<p>ಗ್ರಾಮದ ಮಂಗಳ ಬಾಯಿ ಪರಶುರಾಮ ಠಾಕೂರ ಅವರಿಗೆ ಸೇರಿದ ಮನೆಯಲ್ಲಿರುವ ಅಡುಗೆ ಸಾಮಾನುಗಳು, ದವಸ ಧಾನ್ಯಗಳು, ಚಿನ್ನದ ಒಡವೆ, ಮೋಟಾರ್ ಬೈಕ್, ನಗದು ಸುಟ್ಟಿವೆ. ಈ ಕುರಿತು ಅಗ್ನಿಶಾಮಕ ಅಧಿಕಾರಿ ವಿಶ್ವನಾಥ್ ಕಾಮರೆಡ್ಡಿ‘ನಮ್ಮ ಅಗ್ನಿಶಾಮಕ ವಾಹನ ಹೋಗುವುದರ ಒಳಗಾಗಿ ಎಲ್ಲವೂ ಸುಟ್ಟು ಹೋಗಿದ್ದು ಸಾಕಷ್ಟು ಹಾನಿಯಾಗಿದೆ. ಟ್ರ್ಯಾಕ್ಟರ್ ಟ್ರಾಲಿ ಮಾರಿ ಮನೆಯಲ್ಲಿ ಹಣ ಇಟ್ಟಿದ್ದರು. ₹ 1 ಲಕ್ಷ ನಗದು, 50 ಗ್ರಾಂ ಚಿನ್ನಇತ್ತು ಎಂದು ಅವರು ತಿಳಿಸಿದರು.</p>.<p>‘ಮನೆಯವರು ಅನಾಥರಾಗಿದ್ದಾರೆ. ಅವರಿಗೆ ತಕ್ಷಣ ತಾಲೂಕು ಆಡಳಿತ ವಂದನೆ ಮಾಡಿ ಅವರಿಗೆ ತಾತ್ಕಾಲಿಕ ವಾಸ ಮಾಡಲು ಶೆಡ್ಡು ನಿರ್ಮಿಸಿ ಕೊಡಬೇಕು. ಮತ್ತು ಪಡಿತರ ಆರಾಧನೆಯನ್ನು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.</p>.<p>ಈ ಕುರಿತು ಶಾಸಕ ಎಂ. ವೈ. ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಅರುಣ್ ಕುಮಾರ್ ಪಾಟೀಲ್ ಮಾಹಿತಿ ನೀಡಿ, ‘ತಕ್ಷಣ ನೊಂದ ಕುಟುಂಬಕ್ಕೆ ₹ 11 ಸಾವಿರ ವೈಯಕ್ತಿಕ ಪರಿಹಾರ ನೀಡಲಾಗಿದೆ. ಮುಂದೆ ಸರ್ಕಾರದಿಂದ ಎಲ್ಲಾ ನೆರವು ಕುಟುಂಬಕ್ಕೆ ನೀಡಲಾಗುವುದು ಕುಟುಂಬಸ್ಥರು ಧೈರ್ಯವಾಗಿರಬೇಕು ಮತ್ತು ತಾತ್ಕಾಲಿಕವಾಗಿ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ ಅವುಗಳನ್ನ ಪೂರೈಸಲಾಗುವುದು’ ಎಂದು ತಿಳಿಸಿದರು.</p>.<p>ಸ್ಥಳಕ್ಕೆ ಕಂದಾಧಿಕಾರಿಗಳು ಗ್ರಾಮ ಲೆಕ್ಕಿಗರು ಭೇಟಿ ನೀಡಿ ವರದಿ ಮಾಡಿಕೊಂಡು ಹೋಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಸವರಾಜ ಪಾಟೀಲ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ;</strong> ತಾಲೂಕಿನ ಅತನೂರು ಗ್ರಾಮದಲ್ಲಿ ಗುರುವಾರ ಅಡುಗೆ ಅನಿಲ ಸೋರಿಕೆಯಾಗಿ ಇಡೀ ಮನೆ ಸುಟ್ಟು ಸುಮಾರು ₹ 5 ಲಕ್ಷ ಹಾನಿಯಾದ ಬಗ್ಗೆ ವರದಿಯಾಗಿದೆ.</p>.<p>ಗ್ರಾಮದ ಮಂಗಳ ಬಾಯಿ ಪರಶುರಾಮ ಠಾಕೂರ ಅವರಿಗೆ ಸೇರಿದ ಮನೆಯಲ್ಲಿರುವ ಅಡುಗೆ ಸಾಮಾನುಗಳು, ದವಸ ಧಾನ್ಯಗಳು, ಚಿನ್ನದ ಒಡವೆ, ಮೋಟಾರ್ ಬೈಕ್, ನಗದು ಸುಟ್ಟಿವೆ. ಈ ಕುರಿತು ಅಗ್ನಿಶಾಮಕ ಅಧಿಕಾರಿ ವಿಶ್ವನಾಥ್ ಕಾಮರೆಡ್ಡಿ‘ನಮ್ಮ ಅಗ್ನಿಶಾಮಕ ವಾಹನ ಹೋಗುವುದರ ಒಳಗಾಗಿ ಎಲ್ಲವೂ ಸುಟ್ಟು ಹೋಗಿದ್ದು ಸಾಕಷ್ಟು ಹಾನಿಯಾಗಿದೆ. ಟ್ರ್ಯಾಕ್ಟರ್ ಟ್ರಾಲಿ ಮಾರಿ ಮನೆಯಲ್ಲಿ ಹಣ ಇಟ್ಟಿದ್ದರು. ₹ 1 ಲಕ್ಷ ನಗದು, 50 ಗ್ರಾಂ ಚಿನ್ನಇತ್ತು ಎಂದು ಅವರು ತಿಳಿಸಿದರು.</p>.<p>‘ಮನೆಯವರು ಅನಾಥರಾಗಿದ್ದಾರೆ. ಅವರಿಗೆ ತಕ್ಷಣ ತಾಲೂಕು ಆಡಳಿತ ವಂದನೆ ಮಾಡಿ ಅವರಿಗೆ ತಾತ್ಕಾಲಿಕ ವಾಸ ಮಾಡಲು ಶೆಡ್ಡು ನಿರ್ಮಿಸಿ ಕೊಡಬೇಕು. ಮತ್ತು ಪಡಿತರ ಆರಾಧನೆಯನ್ನು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.</p>.<p>ಈ ಕುರಿತು ಶಾಸಕ ಎಂ. ವೈ. ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಅರುಣ್ ಕುಮಾರ್ ಪಾಟೀಲ್ ಮಾಹಿತಿ ನೀಡಿ, ‘ತಕ್ಷಣ ನೊಂದ ಕುಟುಂಬಕ್ಕೆ ₹ 11 ಸಾವಿರ ವೈಯಕ್ತಿಕ ಪರಿಹಾರ ನೀಡಲಾಗಿದೆ. ಮುಂದೆ ಸರ್ಕಾರದಿಂದ ಎಲ್ಲಾ ನೆರವು ಕುಟುಂಬಕ್ಕೆ ನೀಡಲಾಗುವುದು ಕುಟುಂಬಸ್ಥರು ಧೈರ್ಯವಾಗಿರಬೇಕು ಮತ್ತು ತಾತ್ಕಾಲಿಕವಾಗಿ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ ಅವುಗಳನ್ನ ಪೂರೈಸಲಾಗುವುದು’ ಎಂದು ತಿಳಿಸಿದರು.</p>.<p>ಸ್ಥಳಕ್ಕೆ ಕಂದಾಧಿಕಾರಿಗಳು ಗ್ರಾಮ ಲೆಕ್ಕಿಗರು ಭೇಟಿ ನೀಡಿ ವರದಿ ಮಾಡಿಕೊಂಡು ಹೋಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಸವರಾಜ ಪಾಟೀಲ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>