ಗ್ರಾಮದ ಮಂಗಳ ಬಾಯಿ ಪರಶುರಾಮ ಠಾಕೂರ ಅವರಿಗೆ ಸೇರಿದ ಮನೆಯಲ್ಲಿರುವ ಅಡುಗೆ ಸಾಮಾನುಗಳು, ದವಸ ಧಾನ್ಯಗಳು, ಚಿನ್ನದ ಒಡವೆ, ಮೋಟಾರ್ ಬೈಕ್, ನಗದು ಸುಟ್ಟಿವೆ. ಈ ಕುರಿತು ಅಗ್ನಿಶಾಮಕ ಅಧಿಕಾರಿ ವಿಶ್ವನಾಥ್ ಕಾಮರೆಡ್ಡಿ‘ನಮ್ಮ ಅಗ್ನಿಶಾಮಕ ವಾಹನ ಹೋಗುವುದರ ಒಳಗಾಗಿ ಎಲ್ಲವೂ ಸುಟ್ಟು ಹೋಗಿದ್ದು ಸಾಕಷ್ಟು ಹಾನಿಯಾಗಿದೆ. ಟ್ರ್ಯಾಕ್ಟರ್ ಟ್ರಾಲಿ ಮಾರಿ ಮನೆಯಲ್ಲಿ ಹಣ ಇಟ್ಟಿದ್ದರು. ₹ 1 ಲಕ್ಷ ನಗದು, 50 ಗ್ರಾಂ ಚಿನ್ನಇತ್ತು ಎಂದು ಅವರು ತಿಳಿಸಿದರು.