ಆಳಂದ ಡಿಪೊಕ್ಕೆ ಸೇರಿದ ಸೊಲ್ಲಾಪುರ–ಕಲಬುರ್ಗಿ ಬಸ್ ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಮಗಳು, ಹೆತ್ತವರೆದುರೇ ಕೊನೆಯುಸಿರೆಳೆದಳು. ಮಲ್ಲಿನಾಥ, ಬೈಕ್ನಲ್ಲಿ ಕುಳಿತಿದ್ದ ಬಾಲಕ ಸುನಿಲ್ಕುಮಾರ್ ಜಮಾದಾರಗೆ ಗಾಯಗಳಾಗಿವೆ. ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದು, ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.