ಇ- ಸ್ವತ್ತು ಅಡಿಯಲ್ಲಿ ಫಾರಂ ನಂ.3 ಬಾರದ ಕಾರಣ ಅನೇಕ ಬಡವರು, ಕೃಷಿಕರು ಬ್ಯಾಂಕುಗಳ ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸುಮಾರು 20ರಿಂದ 25 ವರ್ಷಗಳ ಹಿಂದೆ ಹೊಲದ ಮಾಲೀಕನಿಂದ ಲಿಖಿತ ಒಡಂಬಡಿಕೆಯೊಂದಿಗೆ ಜಾಗ ಖರೀದಿಸಿ ಅಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದೇ ಮನೆಗೆ ಪಟ್ಟಣ ಪಂಚಾಯಿತಿ ಇರುವಾಗ ಮನೆ ಮಾಲೀಕರ ಹೆಸರಿಗೆ ಖಾತಾ ಮಾಡಿ ಕೊಡಲಾಗಿದೆ. ಜತೆಗೆ ಹಲವು ವರ್ಷಗಳಿಂದ ತೆರಿಗೆಯನ್ನು ಪಾವತಿಸಿದ್ದಾರೆ. ಆದರೆ ಇಂತಹವರಿಗೆ ಈಗ ಫಾರಂ ನಂ.3 ಇ-ಸ್ವತ್ತು ಅಡಿಯಲ್ಲಿ ಫಾರಂ ನಂ.3 ಬರುತ್ತಿಲ್ಲ. ಇದರಿಂದ ಮನೆ ಮಾರಾಟ, ಸಾಲ ಪಡೆಯುವಿಕೆ ಸೇರಿದಂತೆ ಅನೇಕ ತೊಂದರೆಗಳು ಎದುರಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.