<p><strong>ಚಿಂಚೋಳಿ</strong>(ಕಲಬುರಗಿ ಜಿಲ್ಲೆ): ಇಲ್ಲಿನ ಚಂದಾಪುರದ ತಾಲ್ಲೂಕು ಆಸ್ಪತ್ರೆಯ ಹಿಂದುಗಡೆ ಇರುವ ಆಕ್ಸಿಜನ್ ಘಟಕದಲ್ಲಿ ಭಾನುವಾರ ಸ್ಫೋಟ ಸಂಭವಿಸಿದೆ. </p><p>ಸ್ಫೋಟದಿಂದ ಭಾರಿ ಸದ್ದು ಬಂದಿದ್ದು, ಆಮ್ಲಜನಕದ ವಾಸನೆ ಆಸ್ಪತ್ರೆ ಮತ್ತು ಸುತ್ತಲಿನ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿದೆ. ಇದರಿಂದ ಭೀತಿಗೊಳಗಾದ ಸಿಬ್ಬಂದಿ ಹಾಗೂ ರೋಗಿಗಳು ಆಸ್ಪತ್ರೆ ಖಾಲಿ ಮಾಡಿ ಆವರಣದಲ್ಲಿ ಕುಳಿತಿದ್ದಾರೆ. </p><p>ವೈದ್ಯರು ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ಖಾಲಿ ಮಾಡಿದ್ದಾರೆ. ಆಕ್ಸಿಜನ್ ಘಟಕದಲ್ಲಿ ನಿರಂತರ ಸೋರಿಕೆ ಆಗುತ್ತಿದೆ. ಸಮೀಪ ಹೋಗಲು ಯಾರನ್ನು ಬಿಡುತ್ತಿಲ್ಲ. ಅಗ್ನಿ ಶಾಮಕ ದಳದ ಅಧಿಕಾರಿ ಹಸನ್ ನೇತೃತ್ವದಲ್ಲಿ ಸೋರಿಕೆ ತಡೆಯುವ ಪ್ರಯತ್ನ ಮುಂದುವರಿದಿದೆ. </p><p>ಆಸ್ಪತ್ರೆ ಸಿಎಂಒ ಡಾ. ಸಂತೋಷ ಪಾಟೀಲ, ಡಾ. ಜಾಕೀರ್ ಅನ್ಸಾರಿ ಹಾಗೂ ಸಿಬ್ಬಂದಿ ಮತ್ತು ರೋಗಿಗಳು ಆಸ್ಪತ್ರೆಯ ಹೊರಗಡೆ ನಿಂತಿದ್ದರು. </p><p>ಸಬ್ ಇನ್ಸ್ಪೆಕ್ಟರ್ ಹಣಮಂತ ಭಂಕಲಗಿ ಸ್ಥಳಕ್ಕೆ ಧಾವಿಸಿದ್ದು ಸುತ್ತಲಿನ ಬಡಾವಣೆ ಜನರಿಗೂ ಜಾಗೃತಿ ವಹಿಸಲು ಸೂಚಿಸಿದ್ದಾರೆ. </p><p>ಆಸ್ಪತ್ರೆಯ ವಿದ್ಯುತ್ ಪೂರೈಕೆ, ಜನರೇಟರ್ ಎಲ್ಲವೂ ಬಂದ್ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಎರಡು ಆಮ್ಲಜನಕ ಘಟಕಗಳಿದ್ದು ಒಂದರಲ್ಲಿ ಸೋರಿಕೆ ಹಾಗೂ ಭಾರಿ ಸದ್ದು ಕೇಳಿ ಬಂದ ಕಾರಣ ಸ್ಥಳೀಯರು ಭಯಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>(ಕಲಬುರಗಿ ಜಿಲ್ಲೆ): ಇಲ್ಲಿನ ಚಂದಾಪುರದ ತಾಲ್ಲೂಕು ಆಸ್ಪತ್ರೆಯ ಹಿಂದುಗಡೆ ಇರುವ ಆಕ್ಸಿಜನ್ ಘಟಕದಲ್ಲಿ ಭಾನುವಾರ ಸ್ಫೋಟ ಸಂಭವಿಸಿದೆ. </p><p>ಸ್ಫೋಟದಿಂದ ಭಾರಿ ಸದ್ದು ಬಂದಿದ್ದು, ಆಮ್ಲಜನಕದ ವಾಸನೆ ಆಸ್ಪತ್ರೆ ಮತ್ತು ಸುತ್ತಲಿನ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿದೆ. ಇದರಿಂದ ಭೀತಿಗೊಳಗಾದ ಸಿಬ್ಬಂದಿ ಹಾಗೂ ರೋಗಿಗಳು ಆಸ್ಪತ್ರೆ ಖಾಲಿ ಮಾಡಿ ಆವರಣದಲ್ಲಿ ಕುಳಿತಿದ್ದಾರೆ. </p><p>ವೈದ್ಯರು ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ಖಾಲಿ ಮಾಡಿದ್ದಾರೆ. ಆಕ್ಸಿಜನ್ ಘಟಕದಲ್ಲಿ ನಿರಂತರ ಸೋರಿಕೆ ಆಗುತ್ತಿದೆ. ಸಮೀಪ ಹೋಗಲು ಯಾರನ್ನು ಬಿಡುತ್ತಿಲ್ಲ. ಅಗ್ನಿ ಶಾಮಕ ದಳದ ಅಧಿಕಾರಿ ಹಸನ್ ನೇತೃತ್ವದಲ್ಲಿ ಸೋರಿಕೆ ತಡೆಯುವ ಪ್ರಯತ್ನ ಮುಂದುವರಿದಿದೆ. </p><p>ಆಸ್ಪತ್ರೆ ಸಿಎಂಒ ಡಾ. ಸಂತೋಷ ಪಾಟೀಲ, ಡಾ. ಜಾಕೀರ್ ಅನ್ಸಾರಿ ಹಾಗೂ ಸಿಬ್ಬಂದಿ ಮತ್ತು ರೋಗಿಗಳು ಆಸ್ಪತ್ರೆಯ ಹೊರಗಡೆ ನಿಂತಿದ್ದರು. </p><p>ಸಬ್ ಇನ್ಸ್ಪೆಕ್ಟರ್ ಹಣಮಂತ ಭಂಕಲಗಿ ಸ್ಥಳಕ್ಕೆ ಧಾವಿಸಿದ್ದು ಸುತ್ತಲಿನ ಬಡಾವಣೆ ಜನರಿಗೂ ಜಾಗೃತಿ ವಹಿಸಲು ಸೂಚಿಸಿದ್ದಾರೆ. </p><p>ಆಸ್ಪತ್ರೆಯ ವಿದ್ಯುತ್ ಪೂರೈಕೆ, ಜನರೇಟರ್ ಎಲ್ಲವೂ ಬಂದ್ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಎರಡು ಆಮ್ಲಜನಕ ಘಟಕಗಳಿದ್ದು ಒಂದರಲ್ಲಿ ಸೋರಿಕೆ ಹಾಗೂ ಭಾರಿ ಸದ್ದು ಕೇಳಿ ಬಂದ ಕಾರಣ ಸ್ಥಳೀಯರು ಭಯಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>