ಕುಂಚಾವರಂ ನಿವಾಸಿಯಾಗಿದ್ದ ಹಣಮಂತ ಕೆಲ ವರ್ಷದ ಹಿಂದೆ ತೆಲಂಗಾಣದ ತಾಂಡೂರಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ನೆಲೆಸಿದ್ದರು. ಈಚೆಗೆ ಹೈದರಾಬಾದ್ ಗೆ ತೆರಳಿದ್ದ ಹಣಮಂತ ಮಕ್ಕಳೊಂದಿಗೆ ಕುಂಚಾವರಂಗೆ ಬಂದಿದ್ದಾರೆ. ಶುಕ್ರವಾರ ತನ್ನ ಸಹೋದರ ಗ್ರಾ.ಪಂ. ಸದಸ್ಯ ಗೋಪಾಲ ಎಂಬುವವರಿಗೆ ಕರೆ ಮಾಡಿ, ನಾನು ಮಕ್ಕಳೊಂದಿಗೆ ಬಾವಿದ್ದು ಬಿದ್ದು ಸಾಯುತ್ತಿದ್ದೇನೆ. ನನ್ನ ಶವ ತೆಗೆದು ಅಂತ್ಯಕ್ರಿಯೆ ನಡೆಸುವಂತೆ ಕೋರಿಕೊಂಡಿದ್ದಾನೆ. ಆಗ ಗೋಪಾಲನು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕರ್ನಾಟಕ ಮತ್ತು ತೆಲಂಗಾಣ ಪೊಲೀಸರು, ಅಗ್ನಿಶಾಮಕ ಠಾಣೆಯವರು ಹುಡುಕಿದರೂ ಪತ್ತೆಯಾಗಿಲ್ಲ. ಭಾನುವಾರ ಕುಂಚಾವರಂ ಬಳಿಯ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಮೂವರ ಶವ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕುಂಚಾವರಂ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶವ ಹೊರ ತೆಗೆದಿದ್ದಾರೆ.