ಕಲಬುರ್ಗಿ: ಬಸವ ಜಯಂತಿ ಅಂಗವಾಗಿ ಡಾ.ಶರಣಕುಮಾರ ಮೋದಿ ಪ್ರತಿಷ್ಠಾನ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಜಿಮ್ಸ್ನ ಹೊರಭಾಗದಲ್ಲಿ ರೋಗಿಗಳ ಸಂಬಂಧಿಕರಿಗೆ ಉಪಾಹಾರ, ಹಣ್ಣು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಸುಮಾರು 600 ಪ್ಯಾಕೆಟ್ ಉಪಾಹಾರದ ಪ್ಯಾಕೆಟ್ಗಳನ್ನು ಪ್ರತಿಷ್ಠಾನದ ಉಪಾಧ್ಯಕ್ಷ ಭೀಮಾಶಂಕರ ಮೀಟೇಕಾರ, ಮಲ್ಲಿಕಾರ್ಜುನ ಮೋದಿ ಅವರು ವಿತರಿಸಿದರು. ಈ ಉಚಿತ ಉಪಾಹಾರ ಸೇವೆಯು ಲಾಕ್ ಡೌನ್ ಮುಗಿಯುವವರೆಗೆ ಇರುತ್ತದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಜಯವರ್ಧನ ಅಂಬಲಗಿ ತಿಳಿಸಿದ್ದಾರೆ.