ಶುಕ್ರವಾರ ಸಂಜೆ ಹೊತ್ತಿನಿಂದಲೇ ಕಾರ್ಮೋಡ ಕವಿದಿತ್ತು. ರಾತ್ರಿ 7ರ ನಂತರ ನಿರಂತರವಾಗಿ ಬೀಸಿದ ಬಿರುಗಾಳಿ ಮಳೆಯಿಂದಾಗಿ ನಾಯ್ಕಲ್, ಅಬ್ಬೇತುಮಕೂರು, ಗುರಸಣಗಿ, ಹುಲ್ಕಲ್ (ಬಿ), ತಳಕು, ಹೆಡಗಿಮದ್ರಿ ಗ್ರಾಮಗಳ ರೈತರ ಭತ್ತದ ಬೆಳೆ ನೆಲಕಚ್ಚಿದ್ದು, ಅಂದಾಜು ₹ 10ಲಕ್ಷ ಬೆಳೆಹಾನಿ ಸಂಭವಿಸಿರಬಹುದು ಎಂದು ರೈತರಾದ ಪರಶುರಾಮ, ಅಂಜಿನಪ್ಪ ತಿಳಿಸಿದರು.