<p><strong>ಕಲಬುರಗಿ</strong>: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಜನವರಿ 28ರಿಂದ ಪದವಿ ತರಗತಿಗಳ ಎನ್ಇಪಿ ಹಾಗೂ ಎಸ್ಇಪಿ 1, 3 ಮತ್ತು 5ನೇ ಸೆಮಿಸ್ಟರ್ (ರೆಗ್ಯುಲರ್/ ರಿಪೀಟರ್ಸ್ಸ್ ) ಪರೀಕ್ಷೆಗಳು ಆರಂಭವಾಗಿವೆ. ಆದರೂ ಈವರೆಗೆ ಬಾಹ್ಯ ಹಿರಿಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ (ತಂಡ)ಗಳನ್ನು ರಚನೆ ಮಾಡಿಲ್ಲ ಎಂದು ತಿಳಿದು ಬಂದಿದೆ.</p>.<p>ವಿಶ್ವವಿದ್ಯಾಲಯ ವ್ಯಾಪ್ತಿಯ ಬೆರಳೆಣಿಕೆ ಕಾಲೇಜುಗಳನ್ನು ಹೊರತುಪಡಿಸಿ, ಹಲವಾರು ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಾರೆ ಎಂಬ ಆರೋಪ ಇದೆ. ಮೊದಲು ನಡೆದ ಪರೀಕ್ಷೆಗಳಲ್ಲಿ ಅವಧಿಗೂ ಮೊದಲೇ ವಾಟ್ಸ್ಆ್ಯಪ್ನಲ್ಲಿ ಬಯಲಾದ ಪ್ರಶ್ನೆಪತ್ರಿಕೆ ಹಾಗೂ ಪರೀಕ್ಷಾ ಸಾಮೂಹಿಕ ನಕಲು ನಡೆದ ಪ್ರಕರಣಗಳು ದಾಖಲಾಗಿವೆ.</p>.<p>ನಕಲು ತಡೆಗಟ್ಟಲು ಪ್ರಾಮಾಣಿಕ ಹಿರಿಯ ಪ್ರಾಧ್ಯಾಪಕರನ್ನು ಪರೀಕ್ಷಾ ಕಾರ್ಯಗಳಿಗೆ ನೇಮಿಸುವುದು, ಮುಖ್ಯವಾಗಿ ಪರೀಕ್ಷೆಗಳ ಪಾವಿತ್ರತೆ ಕಾಪಾಡುವುದು ಮತ್ತು ದುರಾಚಾರ ನಡೆಯದಂತೆ ತಡೆಗಟ್ಟಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ.</p>.<p>ಪರೀಕ್ಷಾ ಕೈಪಿಡಿಯ ಪ್ರಕಾರ ಕಾಲೇಜು ಪ್ರಾಂಶುಪಾಲರನ್ನು ಆಂತರಿಕ ಮೇಲ್ವಿಚಾರಕರು ಹಾಗೂ ಬೇರೆ ಕಾಲೇಜಿನ ಹಿರಿಯ ಬೋಧನಾ ಸಿಬ್ಬಂದಿಯನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುವುದು ವಾಡಿಕೆ. ಜೊತೆಗೆ ವಿಚಕ್ಷಣದಳ (ತಂಡ)ಗಳನ್ನು ರಚನೆ ಮಾಡಿ ಪರೀಕ್ಷೆಯಲ್ಲಿ ನಕಲು ತಡೆಯಲು ಕ್ರಮವಹಿಸುವ ಪ್ರಕ್ರಿಯೆ ಹಿಂದನಿಂದಲೂ ಬಂದಿದೆ.</p>.<p>ಪರೀಕ್ಷ ಆರಂಭವಾಗಿ ಮೂರು ದಿನಗಳು ಕಳೆದರೂ ಇನ್ನೂ ಬಾಹ್ಯ ಹಿರಿಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ (ತಂಡ)ಗಳನ್ನು ರಚಿಸಿ ನೇಮಕ ಮಾಡದಿರುವುದು ಸರಿಯಲ್ಲ. ಪರೀಕ್ಷೆಗಳಿಗೆ ಆದಷ್ಟು ಬೇಗ ನೇಮಕ ಮಾಡಿ ಆದೇಶಿಸಿ, ನ್ಯಾಯ ಒದಗಿಸಬೇಕು’ ಎಂಬುದು ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹವಾಗಿದೆ.</p>.<p>ಪ್ರತಿ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಆಂತರಿಕ ಹಾಗೂ ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಿಸಬೇಕು. ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಆ ಸಂಖ್ಯೆಯೂ ಹೆಚ್ಚಿಸಬೇಕು ಎಂಬ ನಿಯಮವಿದೆ. ಈ ಸಿಬ್ಬಂದಿ ಪ್ರಶ್ನೆಪತ್ರಿಕೆ ಪ್ಯಾಕೆಟ್ ಪರಿಶೀಲಿಸುವುದು, ಪರೀಕ್ಷಾ ಕೊಠಡಿಗಳಿಗೆ ಪೂರೈಸುವುದು, ನಿಗದಿತ ಸಮಯಕ್ಕೆ ಪರೀಕ್ಷೆಗಳನ್ನು ಪ್ರಾರಂಭಿಸುವುದು, ನಕಲು ನಡೆಯದಂತೆ ನೋಡಿಕೊಳ್ಳುವುದು, ಉತ್ತರ ಪತ್ರಿಕೆಗಳನ್ನು ಸರಿಯಾಗಿ ಪರಿಶೀಲಿಸಿ, ಪ್ಯಾಕೆಟ್ ಮಾಡಿಸಿ ನೊಡಲ್ ಕೇಂದ್ರಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ.</p>.<p>ವಿಚಕ್ಷಣದಳ ತಂಡದ ನಕಲು ಮತ್ತು ಇನ್ನಿತರ ಪರೀಕ್ಷಾ ದುರಾಚಾರ ನಡೆಸಿರುವ ವಿದ್ಯಾರ್ಥಿಗಳನ್ನು ಎಂಪಿಸಿ ವರದಿ ಮಾಡುವುದು, ಸಾಮೂಹಿಕ ನಕಲು, ಇನ್ನಿತರ ಗಂಭೀರ ಪರೀಕ್ಷಾ ದುರಾಚಾರದ ಮತ್ತು ಕಾಲೇಜು ಆಡಳಿತ ಮಂಡಳಿ/ಸಿಬ್ಬಂದಿ ಪಾತ್ರದ ಕುರಿತು ಮಾಹಿತಿ ನೀಡುವುದರೊಂದಿಗೆ ಕ್ರಮಕ್ಕಾಗಿ ಕುಲಸಚಿವ (ಮೌಲ್ಯಮಾಪನ )ರಿಗೆ ವರದಿ ಸಲ್ಲಿಸುತ್ತಾರೆ.</p>.<div><blockquote>ಬಾಹ್ಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ ತಂಡ ನೇಮಕವಾಗದಿರುವುದರಿಂದ ಪರೀಕ್ಷೆಗಳಲ್ಲಿ ನಕಲು ನಡೆಯುವ ಸಾಧ್ಯತೆ ಇದೆ. ಶೀಘ್ರ ತಂಡ ರಚನೆ ಮಾಡಬೇಕು.</blockquote><span class="attribution">– ಹೆಸರು ಹೇಳಲು ಇಚ್ಚಿಸಿದ ಪ್ರಾಧ್ಯಾಪಕ</span></div>.<div><blockquote>ಪದವಿ ಪರೀಕ್ಷೆಗಳಿಗಾಗಿ ವಿಚಕ್ಷಣದಳ ತಂಡದ ನೇಮಕಕ್ಕೆ ಪಟ್ಟಿ ತಯಾರಿಸಲಾಗಿದ್ದು ಕುಲಪತಿಗಳ ಅನುಮತಿ ಪಡೆದು ನೇಮಕ ಮಾಡಲಾಗುವುದು.</blockquote><span class="attribution">– ಎನ್.ಜಿ.ಕನ್ನೂರ, ಕುಲಸಚಿವ (ಮೌಲ್ಯಮಾಪನ)</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಜನವರಿ 28ರಿಂದ ಪದವಿ ತರಗತಿಗಳ ಎನ್ಇಪಿ ಹಾಗೂ ಎಸ್ಇಪಿ 1, 3 ಮತ್ತು 5ನೇ ಸೆಮಿಸ್ಟರ್ (ರೆಗ್ಯುಲರ್/ ರಿಪೀಟರ್ಸ್ಸ್ ) ಪರೀಕ್ಷೆಗಳು ಆರಂಭವಾಗಿವೆ. ಆದರೂ ಈವರೆಗೆ ಬಾಹ್ಯ ಹಿರಿಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ (ತಂಡ)ಗಳನ್ನು ರಚನೆ ಮಾಡಿಲ್ಲ ಎಂದು ತಿಳಿದು ಬಂದಿದೆ.</p>.<p>ವಿಶ್ವವಿದ್ಯಾಲಯ ವ್ಯಾಪ್ತಿಯ ಬೆರಳೆಣಿಕೆ ಕಾಲೇಜುಗಳನ್ನು ಹೊರತುಪಡಿಸಿ, ಹಲವಾರು ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಾರೆ ಎಂಬ ಆರೋಪ ಇದೆ. ಮೊದಲು ನಡೆದ ಪರೀಕ್ಷೆಗಳಲ್ಲಿ ಅವಧಿಗೂ ಮೊದಲೇ ವಾಟ್ಸ್ಆ್ಯಪ್ನಲ್ಲಿ ಬಯಲಾದ ಪ್ರಶ್ನೆಪತ್ರಿಕೆ ಹಾಗೂ ಪರೀಕ್ಷಾ ಸಾಮೂಹಿಕ ನಕಲು ನಡೆದ ಪ್ರಕರಣಗಳು ದಾಖಲಾಗಿವೆ.</p>.<p>ನಕಲು ತಡೆಗಟ್ಟಲು ಪ್ರಾಮಾಣಿಕ ಹಿರಿಯ ಪ್ರಾಧ್ಯಾಪಕರನ್ನು ಪರೀಕ್ಷಾ ಕಾರ್ಯಗಳಿಗೆ ನೇಮಿಸುವುದು, ಮುಖ್ಯವಾಗಿ ಪರೀಕ್ಷೆಗಳ ಪಾವಿತ್ರತೆ ಕಾಪಾಡುವುದು ಮತ್ತು ದುರಾಚಾರ ನಡೆಯದಂತೆ ತಡೆಗಟ್ಟಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ.</p>.<p>ಪರೀಕ್ಷಾ ಕೈಪಿಡಿಯ ಪ್ರಕಾರ ಕಾಲೇಜು ಪ್ರಾಂಶುಪಾಲರನ್ನು ಆಂತರಿಕ ಮೇಲ್ವಿಚಾರಕರು ಹಾಗೂ ಬೇರೆ ಕಾಲೇಜಿನ ಹಿರಿಯ ಬೋಧನಾ ಸಿಬ್ಬಂದಿಯನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುವುದು ವಾಡಿಕೆ. ಜೊತೆಗೆ ವಿಚಕ್ಷಣದಳ (ತಂಡ)ಗಳನ್ನು ರಚನೆ ಮಾಡಿ ಪರೀಕ್ಷೆಯಲ್ಲಿ ನಕಲು ತಡೆಯಲು ಕ್ರಮವಹಿಸುವ ಪ್ರಕ್ರಿಯೆ ಹಿಂದನಿಂದಲೂ ಬಂದಿದೆ.</p>.<p>ಪರೀಕ್ಷ ಆರಂಭವಾಗಿ ಮೂರು ದಿನಗಳು ಕಳೆದರೂ ಇನ್ನೂ ಬಾಹ್ಯ ಹಿರಿಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ (ತಂಡ)ಗಳನ್ನು ರಚಿಸಿ ನೇಮಕ ಮಾಡದಿರುವುದು ಸರಿಯಲ್ಲ. ಪರೀಕ್ಷೆಗಳಿಗೆ ಆದಷ್ಟು ಬೇಗ ನೇಮಕ ಮಾಡಿ ಆದೇಶಿಸಿ, ನ್ಯಾಯ ಒದಗಿಸಬೇಕು’ ಎಂಬುದು ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹವಾಗಿದೆ.</p>.<p>ಪ್ರತಿ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಆಂತರಿಕ ಹಾಗೂ ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಿಸಬೇಕು. ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಆ ಸಂಖ್ಯೆಯೂ ಹೆಚ್ಚಿಸಬೇಕು ಎಂಬ ನಿಯಮವಿದೆ. ಈ ಸಿಬ್ಬಂದಿ ಪ್ರಶ್ನೆಪತ್ರಿಕೆ ಪ್ಯಾಕೆಟ್ ಪರಿಶೀಲಿಸುವುದು, ಪರೀಕ್ಷಾ ಕೊಠಡಿಗಳಿಗೆ ಪೂರೈಸುವುದು, ನಿಗದಿತ ಸಮಯಕ್ಕೆ ಪರೀಕ್ಷೆಗಳನ್ನು ಪ್ರಾರಂಭಿಸುವುದು, ನಕಲು ನಡೆಯದಂತೆ ನೋಡಿಕೊಳ್ಳುವುದು, ಉತ್ತರ ಪತ್ರಿಕೆಗಳನ್ನು ಸರಿಯಾಗಿ ಪರಿಶೀಲಿಸಿ, ಪ್ಯಾಕೆಟ್ ಮಾಡಿಸಿ ನೊಡಲ್ ಕೇಂದ್ರಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ.</p>.<p>ವಿಚಕ್ಷಣದಳ ತಂಡದ ನಕಲು ಮತ್ತು ಇನ್ನಿತರ ಪರೀಕ್ಷಾ ದುರಾಚಾರ ನಡೆಸಿರುವ ವಿದ್ಯಾರ್ಥಿಗಳನ್ನು ಎಂಪಿಸಿ ವರದಿ ಮಾಡುವುದು, ಸಾಮೂಹಿಕ ನಕಲು, ಇನ್ನಿತರ ಗಂಭೀರ ಪರೀಕ್ಷಾ ದುರಾಚಾರದ ಮತ್ತು ಕಾಲೇಜು ಆಡಳಿತ ಮಂಡಳಿ/ಸಿಬ್ಬಂದಿ ಪಾತ್ರದ ಕುರಿತು ಮಾಹಿತಿ ನೀಡುವುದರೊಂದಿಗೆ ಕ್ರಮಕ್ಕಾಗಿ ಕುಲಸಚಿವ (ಮೌಲ್ಯಮಾಪನ )ರಿಗೆ ವರದಿ ಸಲ್ಲಿಸುತ್ತಾರೆ.</p>.<div><blockquote>ಬಾಹ್ಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ ತಂಡ ನೇಮಕವಾಗದಿರುವುದರಿಂದ ಪರೀಕ್ಷೆಗಳಲ್ಲಿ ನಕಲು ನಡೆಯುವ ಸಾಧ್ಯತೆ ಇದೆ. ಶೀಘ್ರ ತಂಡ ರಚನೆ ಮಾಡಬೇಕು.</blockquote><span class="attribution">– ಹೆಸರು ಹೇಳಲು ಇಚ್ಚಿಸಿದ ಪ್ರಾಧ್ಯಾಪಕ</span></div>.<div><blockquote>ಪದವಿ ಪರೀಕ್ಷೆಗಳಿಗಾಗಿ ವಿಚಕ್ಷಣದಳ ತಂಡದ ನೇಮಕಕ್ಕೆ ಪಟ್ಟಿ ತಯಾರಿಸಲಾಗಿದ್ದು ಕುಲಪತಿಗಳ ಅನುಮತಿ ಪಡೆದು ನೇಮಕ ಮಾಡಲಾಗುವುದು.</blockquote><span class="attribution">– ಎನ್.ಜಿ.ಕನ್ನೂರ, ಕುಲಸಚಿವ (ಮೌಲ್ಯಮಾಪನ)</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>