ಪ್ರಶಸ್ತಿ ಸ್ವೀಕರಿಸಿದ ರಂಗ ನಿರ್ದೇಶಕ ಡಾ. ಶ್ರೀಪಾದಭಟ್ ಮಾತನಾಡಿ, ‘ಸಂಕಟವನ್ನು ಸಂಭ್ರಮಿಸುವ ಗುಣ ನಾಟಕದಲ್ಲಿದೆ. ಅದನ್ನು ನಾವು ಅನುಭವಿಸಬೇಕು. ನಾನು ರಂಗಭೂಮಿಗೆ ಬಂದಿರುವುದು ಆಕಸ್ಮಿಕ. ಒಲವು ಸ್ನೇಹ, ಸಾಮರ್ಥ್ಯವನ್ನು ರಂಗಭೂಮಿಯಲ್ಲಿ ಮಾತ್ರ ಕಂಡುಕೊಳ್ಳಲು ಸಾಧ್ಯ. ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಯಿತು’ ಎಂದು ತಿಳಿಸಿದರು.