ಸೇಡಂ ತಾಲ್ಲೂಕು ಯಡ್ಡಳ್ಳಿ-ಸಂಗಾವಿ(ಟಿ) ಮಧ್ಯದ ನಾಲಾದಲ್ಲಿ ರಾಜು ಪತ್ತೆ ಕಾರ್ಯಾಚರಣೆಯಲ್ಲಿ ಸಂಗಾವಿ(ಟಿ) ಗ್ರಾಮದ ಪಲ್ಲವಿ ಕುಂಬಾರ ಮತ್ತು ಮಗುವನ್ನು ಬೋಟನಲ್ಲಿ ಕರೆದುಕೊಂಡು ಬರಲಾಯಿತು. ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಇದ್ದರು
ಸೇಡಂ ತಾಲ್ಲೂಕು ಗುಂಡಳ್ಳಿ(ಬಿ) ದಲ್ಲಿ ಮನೆ ಉರುಳಿರುವುದನ್ನು ಪಿಡಿಒ ರೇಣುಕಾ ಪರಿಶೀಲಿಸಿದರು
ಸೇಡಂ ತಾಲ್ಲೂಕು ಮಳಖೇಡದಲ್ಲಿ ಪ್ರಾರಂಭಿಸಿದ ಕಾಳಜಿ ಕೇಂದ್ರಕ್ಕೆ ಮುಖಂಡ ರಾಜಶೇಖರ ಪುರಾಣಿಕ ಪಿಎಸ್ಐ ಸಂಗಮೇಶ ಭೇಟಿ ನೀಡಿ ಪರಿಸ್ಥಿತಿ ವಿಚಾರಿಸಿದರು
ಸೇಡಂ ತಾಲ್ಲೂಕು ಯಡ್ಡಳ್ಳಿ-ಸಂಗಾವಿ(ಟಿ) ಗ್ರಾಮದ ನಾಲಾ ಸಂಪೂರ್ಣ ಮುಳುಗಿರುವುದು
ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಸಾರ್ವಜನಿಕರು ನದಿಯತ್ತ ತೆರಳಬಾರದು. ಮಳೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಶ್ರೀಯಾಂಕ ಧನಶ್ರೀ, ತಹಶೀಲ್ದಾರ್ ಸೇಡಂ
ಕಾಗಿಣಾ ನದಿ ನೀರಿನ ಪ್ರವಾಹದಲ್ಲಿ ಹರಿದು ಬಂದ ರಾಶಿಗಟ್ಟಲೇ ಕಸ ಸೇತುವೆ ಮೇಲೆ ನಿಂತಿದೆ. ಇದರಿಂದ ವಾಹನ ಸವಾರರು ಸಂಚರಿಸಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
ದೇವುಕುಮಾರ ನಾಟೀಕಾರ, ಕಾಚೂರು ಗ್ರಾಮಸ್ಥ
ಸರ್ಕಾರದಿಂದ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಮಲಗಲು ಸ್ಥಳದ ಜೊತೆಗೆ ಉಚಿತವಾಗಿ ಊಟ ನೀಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.