ಹೊಲದಲ್ಲಿ ಕೆಲಸ ಮುಗಿಸಿಕೊಂಡು ಊರಿಗೆ ಭಾನುವಾರ ಸಂಜೆ ಬೈಕ್ ಮೇಲೆ ಬರುವಾಗ ಹಳ್ಳ ದಾಟಲು ಯತ್ನಿದಾಗ ಪ್ರವಾಹಕ್ಕೆ ಸಿಲುಕಿ ಬೈಕ್ಸ್ಕಿಡ್ ಆಗಿ ಬಿದ್ದಿದೆ. ಅದನ್ನು ಎತ್ತಿಕೊಂಡು ಚಾಲನೆ ಮಾಡಲು ಸುಮಾರು ಹೊತ್ತು ಯತ್ನಿಸಿದ್ದಾರೆ. ಆದರೆ, ವಾಹನದ ಎಂಜಿನ್ ಚಾಲೂ ಆಗಿಲ್ಲ. ತಕ್ಷಣ ಗ್ರಾಮಸ್ಥರು ಹಳ್ಳದ ಬಳಿ ಧಾವಿಸಿ ಬೀರಶೆಟ್ಟಿ ಅವರತ್ತ ಹಗ್ಗವನ್ನು ಎಸೆದಿದ್ದಾರೆ. ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ನೀರಿನ ಸೆಳೆತ ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದರು.