<p><strong>ಕಾಳಗಿ</strong>: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಅದೆಷ್ಟೊ ಜನ ಸರ್ಕಾರಿ ನೌಕರರ ನಡುವೆ ಕಾಯಂ ಇಲ್ಲದೇ ಇರುವ ಅತಿಥಿ ಶಿಕ್ಷಕಿಯೊಬ್ಬರು ₹40 ಸಾವಿರ ಖರ್ಚು ಮಾಡಿ ತಾನು ಬೋಧಿಸುವ ಶಾಲೆಯ ಮೈದಾನದಲ್ಲಿ ಹಸಿರು ಸಸಿಗಳನ್ನು ನೆಟ್ಟು ಶಾಲಾ ಬೆಳವಣಿಗೆಗೆ ಪಾತ್ರರಾಗಿದ್ದಾರೆ.</p>.<p>ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣವೇ ಅತಿಥಿ ಶಿಕ್ಷಕಿ ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅವರ ಹಸಿರು ಪ್ರೀತಿಯ ಕಾಳಜಿಗೆ ಸಾಕ್ಷಿಯಾಗಿದೆ. ಒಟ್ಟು 1 ರಿಂದ 5ನೇ ತರಗತಿ, ಭಾಷೆ ಸಮಸ್ಯೆಯ 19 ಮಕ್ಕಳು, 4 ಕೊಠಡಿ, ತಕ್ಕ ಮಟ್ಟಿಗೆ ಮೈದಾನ ಹೊಂದಿರುವ ಈ ಶಾಲೆಯಲ್ಲಿ ಒಬ್ಬರು ಸರ್ಕಾರಿ ಶಿಕ್ಷಕರು (ನಿಯೋಜನೆ) ಇನ್ನೊಬ್ಬರು ಅತಿಥಿ ಶಿಕ್ಷಕಿ ಇದ್ದಾರೆ.</p>.<p>ಇದೇ ಅಂಗಳದಲ್ಲಿ ಅಂಗನವಾಡಿ ಕೇಂದ್ರವೂ ಇದ್ದು, ಅಲ್ಲಿ 21 ಮಕ್ಕಳಿದ್ದಾರೆ. ಸ್ಥಳೀಯರ ಮತ್ತು ಇಲಾಖೆಯ ಆಸಕ್ತಿಯಿಂದ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್ಗಳಿವೆ. ಕುಡಿಯುವ ನೀರಿಗಾಗಿ ಬೋರ್ವೆಲ್, ಕಾಂಪೌಂಡ್ ಗೋಡೆಗೆ ಗೇಟ್, ಒಳಗಡೆ ಆಟಿಕೆಯ ಒಂದೆರಡು ಪರಿಕರಗಳಿವೆ.</p>.<p>ಈ ಮಧ್ಯೆ ಕಳೆದೊಂದು ವರ್ಷದಿಂದ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕಿ ಸಾವಿತ್ರಿ, ತನ್ನ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ಬೆಳೆಸಿ ಕಳೆ ಹೆಚ್ಚಿಸಲು ಮನಸ್ಸು ಮಾಡಿದ್ದಾರೆ. ಡಿಸೆಂಬರ್ 2025ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿ ನರ್ಸರಿಯಿಂದ ಉಜನಿ-200, ಆರ್.ಕೆ.ಫಾರ್ಮ್-10, ಪೋಸ್ಟರ್ ಫಾರ್ಮ್-10, ಕ್ರಿಸ್ ಮಸ್-4 ಸಸಿಗಳನ್ನು ತರಿಸಿದ್ದಾರೆ.</p>.<p>ಜತೆಗೆ ಅರಣ್ಯ ಇಲಾಖೆಯಿಂದ ನೇರಳೆ ಹಣ್ಣಿನ ಗಿಡ, ಮಹಾಗನಿ, ಚೆರಿ ಗಿಡ ತಂದು ಎಲ್ಲಾ ಸಸಿ, ಗಿಡಗಳನ್ನು ಶಾಲಾ ಅಂಗಳದಲ್ಲಿ ಕ್ರಮಬದ್ಧವಾಗಿ ನೆಟ್ಟಿದ್ದಾರೆ. ಅಂದ ಹೆಚ್ಚಿಸಲು 800 ಇಟ್ಟಿಗೆ, 2 ಟ್ರ್ಯಾಕ್ಟರ್ ಕೆಂಪು ಮಣ್ಣು ಬಳಸಿ ಆಕರ್ಷಿಸುವಂತೆ ಮಾಡಿದ್ದಾರೆ.</p>.<p>ಅಂದಿನಿಂದ ಮಕ್ಕಳು, ಶಿಕ್ಷಕರು ಕಲಿಕೆಯೊಂದಿಗೆ ಸಸಿ-ಗಿಡಗಳಿಗೆ ಬೋರವೆಲ್ ನೀರುಣಿಸುತ್ತ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಲವಲವಿಕೆಯ ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದಾಗಿ ಶಾಲೆ ನೋಡುಗರನ್ನು ಆಕರ್ಷಿಸುತ್ತಿದೆ. ಇದನ್ನು ಗಮನಿಸಿದ ತಾಂಡಾದ ನಿವಾಸಿಗಳು, ಪೋಷಕರು ಅತಿಥಿ ಶಿಕ್ಷಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.</p>.<div><blockquote>ನನ್ನ ಪತಿ ಗಿಡಮರ ಬೆಳೆಸುವ ಆಸಕ್ತಿ ಹೊಂದಿದ್ದಾರೆ. ಆ ಪ್ರೇರಣೆ ನನಗಾಗಿ ನನ್ನ ಶಾಲೆಗೆ ಅಳಿಲು ಸೇವೆ ಮಾಡಿದ್ದೆನೆ. ಮಕ್ಕಳು ಖುಷಿಯಿಂದ ನೀರುಣಿಸುತ್ತಾರೆ</blockquote><span class="attribution"> ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅತಿಥಿ ಶಿಕ್ಷಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಅದೆಷ್ಟೊ ಜನ ಸರ್ಕಾರಿ ನೌಕರರ ನಡುವೆ ಕಾಯಂ ಇಲ್ಲದೇ ಇರುವ ಅತಿಥಿ ಶಿಕ್ಷಕಿಯೊಬ್ಬರು ₹40 ಸಾವಿರ ಖರ್ಚು ಮಾಡಿ ತಾನು ಬೋಧಿಸುವ ಶಾಲೆಯ ಮೈದಾನದಲ್ಲಿ ಹಸಿರು ಸಸಿಗಳನ್ನು ನೆಟ್ಟು ಶಾಲಾ ಬೆಳವಣಿಗೆಗೆ ಪಾತ್ರರಾಗಿದ್ದಾರೆ.</p>.<p>ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣವೇ ಅತಿಥಿ ಶಿಕ್ಷಕಿ ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅವರ ಹಸಿರು ಪ್ರೀತಿಯ ಕಾಳಜಿಗೆ ಸಾಕ್ಷಿಯಾಗಿದೆ. ಒಟ್ಟು 1 ರಿಂದ 5ನೇ ತರಗತಿ, ಭಾಷೆ ಸಮಸ್ಯೆಯ 19 ಮಕ್ಕಳು, 4 ಕೊಠಡಿ, ತಕ್ಕ ಮಟ್ಟಿಗೆ ಮೈದಾನ ಹೊಂದಿರುವ ಈ ಶಾಲೆಯಲ್ಲಿ ಒಬ್ಬರು ಸರ್ಕಾರಿ ಶಿಕ್ಷಕರು (ನಿಯೋಜನೆ) ಇನ್ನೊಬ್ಬರು ಅತಿಥಿ ಶಿಕ್ಷಕಿ ಇದ್ದಾರೆ.</p>.<p>ಇದೇ ಅಂಗಳದಲ್ಲಿ ಅಂಗನವಾಡಿ ಕೇಂದ್ರವೂ ಇದ್ದು, ಅಲ್ಲಿ 21 ಮಕ್ಕಳಿದ್ದಾರೆ. ಸ್ಥಳೀಯರ ಮತ್ತು ಇಲಾಖೆಯ ಆಸಕ್ತಿಯಿಂದ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್ಗಳಿವೆ. ಕುಡಿಯುವ ನೀರಿಗಾಗಿ ಬೋರ್ವೆಲ್, ಕಾಂಪೌಂಡ್ ಗೋಡೆಗೆ ಗೇಟ್, ಒಳಗಡೆ ಆಟಿಕೆಯ ಒಂದೆರಡು ಪರಿಕರಗಳಿವೆ.</p>.<p>ಈ ಮಧ್ಯೆ ಕಳೆದೊಂದು ವರ್ಷದಿಂದ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕಿ ಸಾವಿತ್ರಿ, ತನ್ನ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ಬೆಳೆಸಿ ಕಳೆ ಹೆಚ್ಚಿಸಲು ಮನಸ್ಸು ಮಾಡಿದ್ದಾರೆ. ಡಿಸೆಂಬರ್ 2025ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿ ನರ್ಸರಿಯಿಂದ ಉಜನಿ-200, ಆರ್.ಕೆ.ಫಾರ್ಮ್-10, ಪೋಸ್ಟರ್ ಫಾರ್ಮ್-10, ಕ್ರಿಸ್ ಮಸ್-4 ಸಸಿಗಳನ್ನು ತರಿಸಿದ್ದಾರೆ.</p>.<p>ಜತೆಗೆ ಅರಣ್ಯ ಇಲಾಖೆಯಿಂದ ನೇರಳೆ ಹಣ್ಣಿನ ಗಿಡ, ಮಹಾಗನಿ, ಚೆರಿ ಗಿಡ ತಂದು ಎಲ್ಲಾ ಸಸಿ, ಗಿಡಗಳನ್ನು ಶಾಲಾ ಅಂಗಳದಲ್ಲಿ ಕ್ರಮಬದ್ಧವಾಗಿ ನೆಟ್ಟಿದ್ದಾರೆ. ಅಂದ ಹೆಚ್ಚಿಸಲು 800 ಇಟ್ಟಿಗೆ, 2 ಟ್ರ್ಯಾಕ್ಟರ್ ಕೆಂಪು ಮಣ್ಣು ಬಳಸಿ ಆಕರ್ಷಿಸುವಂತೆ ಮಾಡಿದ್ದಾರೆ.</p>.<p>ಅಂದಿನಿಂದ ಮಕ್ಕಳು, ಶಿಕ್ಷಕರು ಕಲಿಕೆಯೊಂದಿಗೆ ಸಸಿ-ಗಿಡಗಳಿಗೆ ಬೋರವೆಲ್ ನೀರುಣಿಸುತ್ತ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಲವಲವಿಕೆಯ ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದಾಗಿ ಶಾಲೆ ನೋಡುಗರನ್ನು ಆಕರ್ಷಿಸುತ್ತಿದೆ. ಇದನ್ನು ಗಮನಿಸಿದ ತಾಂಡಾದ ನಿವಾಸಿಗಳು, ಪೋಷಕರು ಅತಿಥಿ ಶಿಕ್ಷಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.</p>.<div><blockquote>ನನ್ನ ಪತಿ ಗಿಡಮರ ಬೆಳೆಸುವ ಆಸಕ್ತಿ ಹೊಂದಿದ್ದಾರೆ. ಆ ಪ್ರೇರಣೆ ನನಗಾಗಿ ನನ್ನ ಶಾಲೆಗೆ ಅಳಿಲು ಸೇವೆ ಮಾಡಿದ್ದೆನೆ. ಮಕ್ಕಳು ಖುಷಿಯಿಂದ ನೀರುಣಿಸುತ್ತಾರೆ</blockquote><span class="attribution"> ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅತಿಥಿ ಶಿಕ್ಷಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>