<p><strong>ಚಿಂಚೋಳಿ(ಕಲಬುರ್ಗಿ ಜಿಲ್ಲೆ):</strong> ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ತಾಲ್ಲೂಕಿನ ದೋಟಿಕೊಳ ಕೆರೆಯ ಬಂಡ್ಗೆ ಹಾನಿಯಾಗಿದ್ದು ಕೆರೆ ಒಡೆಯುವುದು ತಪ್ಪಿಸಲು ಸಣ್ಣ ನೀರಾವರಿ ಇಲಾಖೆ ಎಂಜಿನಿಯರಗಳೇ, ಕೆರೆಯ ವೇಸ್ಟವೇರ್ ಒಡೆದು ನೀರು ಹೊರಕ್ಕೆ ಹರಿಸಿ ಕೆರೆ ಖಾಲಿ ಮಾಡುತ್ತಿದ್ದಾರೆ.</p>.<p>ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ 1972ರ ಬರಗಾಲದಲ್ಲಿ ನಿರ್ಮಿಸಿದ ಸಣ್ಣ ನೀರಾವರಿ ಕೆರೆಯ ಬಂಡ್ ಮೇಲಿನಿಂದ ನೀರು ಹರಿದು ಹೋಗಿ 3/4 ಕಡೆ ಬಂಡ್ ಹಾಳಾಗಿದೆ.</p>.<p>ಬಂಡಿನಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ಕೆರೆ ಅಪಾಯದಲ್ಲಿರುವುದು ಅರಿತ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೆರೆಯ ಹೆಚ್ಚುವರಿ ನೀರು ಹರಿದು ಹೋಗುವ ವೇಸ್ಟವೇಯರ್ ಸಂಪೂರ್ಣ ಒಡೆದು ಹಾಕಿದ್ದಾರೆ. ಜತೆಗೆ ಹಿಟ್ಯಾಚಿ ಬಳಸಿ ನೀರು ಹರಿದು ಹೋಗಲು ದಾರಿಮಾಡಲಾಗಿದೆ. ಈ ಮೂಲಕ ಕೆರೆಯ ನೀರು ಖಾಲಿ ಮಾಡಿ ಒಡೆದು ಹೋಗುವ ಕೆರೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.</p>.<p>ಕೆರೆ ಉಳಿಸಿಕೊಳ್ಳು ನೀರು ಖಾಲಿ ಅನಿವಾರ್ಯವಾಗಿದೆ ಎಂದು ಸಣ್ಣ ನೀರಾವರಿ ಉಪವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಪ್ರಜಾವಾಣಿಗೆ ತಿಳಿಸಿದರು.</p>.<p>ಪ್ರವಾಹದ ನೀರಿನ ಒತ್ತಡ ಕಡಿಮೆ ಮಾಡಲು ವೇಸ್ಟವೇಯರ್ ಅಗೆಯಲಾಗಿದೆ ಜತೆಗೆ ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಗೇಟುಗಳು ತೆರೆಯಲಾಗಿದೆ. ಮೂರು ದಿನಗಳಿಂದ ಹರಿಯುತ್ತಿದೆ. ಪ್ರವಾಹದಿಂದ ದೋಟಿಕೊಳ ಕೆರೆಗೆ ₹ 3 ಕೋಟಿ ನಷ್ಟ ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ(ಕಲಬುರ್ಗಿ ಜಿಲ್ಲೆ):</strong> ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ತಾಲ್ಲೂಕಿನ ದೋಟಿಕೊಳ ಕೆರೆಯ ಬಂಡ್ಗೆ ಹಾನಿಯಾಗಿದ್ದು ಕೆರೆ ಒಡೆಯುವುದು ತಪ್ಪಿಸಲು ಸಣ್ಣ ನೀರಾವರಿ ಇಲಾಖೆ ಎಂಜಿನಿಯರಗಳೇ, ಕೆರೆಯ ವೇಸ್ಟವೇರ್ ಒಡೆದು ನೀರು ಹೊರಕ್ಕೆ ಹರಿಸಿ ಕೆರೆ ಖಾಲಿ ಮಾಡುತ್ತಿದ್ದಾರೆ.</p>.<p>ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ 1972ರ ಬರಗಾಲದಲ್ಲಿ ನಿರ್ಮಿಸಿದ ಸಣ್ಣ ನೀರಾವರಿ ಕೆರೆಯ ಬಂಡ್ ಮೇಲಿನಿಂದ ನೀರು ಹರಿದು ಹೋಗಿ 3/4 ಕಡೆ ಬಂಡ್ ಹಾಳಾಗಿದೆ.</p>.<p>ಬಂಡಿನಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ಕೆರೆ ಅಪಾಯದಲ್ಲಿರುವುದು ಅರಿತ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೆರೆಯ ಹೆಚ್ಚುವರಿ ನೀರು ಹರಿದು ಹೋಗುವ ವೇಸ್ಟವೇಯರ್ ಸಂಪೂರ್ಣ ಒಡೆದು ಹಾಕಿದ್ದಾರೆ. ಜತೆಗೆ ಹಿಟ್ಯಾಚಿ ಬಳಸಿ ನೀರು ಹರಿದು ಹೋಗಲು ದಾರಿಮಾಡಲಾಗಿದೆ. ಈ ಮೂಲಕ ಕೆರೆಯ ನೀರು ಖಾಲಿ ಮಾಡಿ ಒಡೆದು ಹೋಗುವ ಕೆರೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.</p>.<p>ಕೆರೆ ಉಳಿಸಿಕೊಳ್ಳು ನೀರು ಖಾಲಿ ಅನಿವಾರ್ಯವಾಗಿದೆ ಎಂದು ಸಣ್ಣ ನೀರಾವರಿ ಉಪವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಪ್ರಜಾವಾಣಿಗೆ ತಿಳಿಸಿದರು.</p>.<p>ಪ್ರವಾಹದ ನೀರಿನ ಒತ್ತಡ ಕಡಿಮೆ ಮಾಡಲು ವೇಸ್ಟವೇಯರ್ ಅಗೆಯಲಾಗಿದೆ ಜತೆಗೆ ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಗೇಟುಗಳು ತೆರೆಯಲಾಗಿದೆ. ಮೂರು ದಿನಗಳಿಂದ ಹರಿಯುತ್ತಿದೆ. ಪ್ರವಾಹದಿಂದ ದೋಟಿಕೊಳ ಕೆರೆಗೆ ₹ 3 ಕೋಟಿ ನಷ್ಟ ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>