ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಕೆರೆ ಉಳಿಸಲು ಅಧಿಕಾರಿಗಳಿಂದಲೇ ನೀರು ಖಾಲಿ

Last Updated 16 ಅಕ್ಟೋಬರ್ 2020, 11:19 IST
ಅಕ್ಷರ ಗಾತ್ರ

ಚಿಂಚೋಳಿ(ಕಲಬುರ್ಗಿ ಜಿಲ್ಲೆ): ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ತಾಲ್ಲೂಕಿನ ದೋಟಿಕೊಳ ಕೆರೆಯ ಬಂಡ್‌ಗೆ ಹಾನಿಯಾಗಿದ್ದು ಕೆರೆ ಒಡೆಯುವುದು ತಪ್ಪಿಸಲು ಸಣ್ಣ ನೀರಾವರಿ ಇಲಾಖೆ ಎಂಜಿನಿಯರಗಳೇ, ಕೆರೆಯ ವೇಸ್ಟವೇರ್ ಒಡೆದು ನೀರು ಹೊರಕ್ಕೆ ಹರಿಸಿ ಕೆರೆ ಖಾಲಿ ಮಾಡುತ್ತಿದ್ದಾರೆ.

ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ 1972ರ ಬರಗಾಲದಲ್ಲಿ ನಿರ್ಮಿಸಿದ ಸಣ್ಣ ನೀರಾವರಿ ಕೆರೆಯ ಬಂಡ್ ಮೇಲಿನಿಂದ ನೀರು ಹರಿದು ಹೋಗಿ 3/4 ಕಡೆ ಬಂಡ್ ಹಾಳಾಗಿದೆ.

ಬಂಡಿನಲ್ಲಿ‌ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ಕೆರೆ ಅಪಾಯದಲ್ಲಿರುವುದು ಅರಿತ ಸಣ್ಣ ನೀರಾವರಿ‌ ಇಲಾಖೆಯ ಎಂಜಿನಿಯರ್ ಕೆರೆಯ ಹೆಚ್ಚುವರಿ‌ ನೀರು ಹರಿದು ಹೋಗುವ ವೇಸ್ಟವೇಯರ್ ಸಂಪೂರ್ಣ ಒಡೆದು ಹಾಕಿದ್ದಾರೆ. ಜತೆಗೆ ಹಿಟ್ಯಾಚಿ ಬಳಸಿ ನೀರು ಹರಿದು ಹೋಗಲು ದಾರಿ‌ಮಾಡಲಾಗಿದೆ. ಈ‌ ಮೂಲಕ ಕೆರೆಯ ನೀರು ಖಾಲಿ‌ ಮಾಡಿ ಒಡೆದು ಹೋಗುವ ಕೆರೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.

ಕೆರೆ ಉಳಿಸಿಕೊಳ್ಳು‌ ನೀರು ಖಾಲಿ ಅನಿವಾರ್ಯವಾಗಿದೆ ಎಂದು ಸಣ್ಣ ನೀರಾವರಿ ಉಪ‌ವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಪ್ರಜಾವಾಣಿಗೆ ತಿಳಿಸಿದರು.

ಪ್ರವಾಹದ ನೀರಿನ ಒತ್ತಡ ಕಡಿಮೆ ಮಾಡಲು ವೇಸ್ಟವೇಯರ್ ಅಗೆಯಲಾಗಿದೆ ಜತೆಗೆ ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಗೇಟುಗಳು ತೆರೆಯಲಾಗಿದೆ. ಮೂರು ದಿನಗಳಿಂದ ಹರಿಯುತ್ತಿದೆ. ಪ್ರವಾಹದಿಂದ ದೋಟಿಕೊಳ ಕೆರೆಗೆ ₹ 3 ಕೋಟಿ ನಷ್ಟ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT