<p><strong>ಯಡ್ರಾಮಿ</strong>: ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ನಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಲೈನ್ಮನ್ರಾಘವೇಂದ್ರ ಹುಲಗಪ್ಪ ಗೋಗರೆ (26) ವಿದ್ಯುತ್ ತಗುಲಿ ಮಂಗಳವಾರ ಬೆಳಿಗ್ಗೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.</p>.<p>ಇವರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಸಾಪೂರ ಗ್ರಾಮದ ನಿವಾಸಿಯಾಗಿದ್ದರು.</p>.<p>ಅರಳಗುಂಡಗಿ ಮತ್ತು ಆಲೂರ ಗ್ರಾಮಕ್ಕೆ ‘ಎಲ್ಸಿ’ (ಲೈನ್ ಕಟ್) ತೆಗೆದುಕೊಳ್ಳಲಾಗಿತ್ತು. ಯಡ್ರಾಮಿ ಉಪವಿಭಾಗದಲ್ಲಿ ಅರಳಗುಂಡಗಿ ಹಾಗೂ ಆಲೂರಕ್ಕೆ ಒಂದೇ ಸಂಪರ್ಕ ಇತ್ತು. ಆಲೂರ ಗ್ರಾಮದಲ್ಲಿ ಕೆಲಸ ಮುಗಿದ ನಂತರ ಅಲ್ಲಿಗೆ ಹೋಗಿದ್ದ ಲೈನ್ಮನ್ ಲೈನ್ ಕ್ಲಿಯರ್ ಎಂದು ಉಪ ವಿಭಾಗ ಕೇಂದ್ರಕ್ಕೆ ತಿಳಿಸಿದ್ದಾರೆ. ತಕ್ಷಣ ಯಡ್ರಾಮಿ ಉಪವಿಭಾಗ ಕೇಂದ್ರದ ಅಧಿಕಾರಿಗಳು ವಿದ್ಯುತ್ ಹಾಕಿದ್ದಾರೆ. ಆಗ ಅರಳಗುಂಡಗಿಯಲ್ಲಿ ಟ್ರನ್ಸ್ಫಾರ್ಮರ್ ಮೇಲೆ ನಿಂತು ಕೆಲಸ ಮಾಡುತ್ತಿದ್ದ ರಾಘವೇಂದ್ರ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.</p>.<p>ಯಡ್ರಾಮಿ ಪಿಎಸ್ಐ ಗಜಾನಂದ ಬಿರಾದಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಡ್ರಾಮಿ</strong>: ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ನಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಲೈನ್ಮನ್ರಾಘವೇಂದ್ರ ಹುಲಗಪ್ಪ ಗೋಗರೆ (26) ವಿದ್ಯುತ್ ತಗುಲಿ ಮಂಗಳವಾರ ಬೆಳಿಗ್ಗೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.</p>.<p>ಇವರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಸಾಪೂರ ಗ್ರಾಮದ ನಿವಾಸಿಯಾಗಿದ್ದರು.</p>.<p>ಅರಳಗುಂಡಗಿ ಮತ್ತು ಆಲೂರ ಗ್ರಾಮಕ್ಕೆ ‘ಎಲ್ಸಿ’ (ಲೈನ್ ಕಟ್) ತೆಗೆದುಕೊಳ್ಳಲಾಗಿತ್ತು. ಯಡ್ರಾಮಿ ಉಪವಿಭಾಗದಲ್ಲಿ ಅರಳಗುಂಡಗಿ ಹಾಗೂ ಆಲೂರಕ್ಕೆ ಒಂದೇ ಸಂಪರ್ಕ ಇತ್ತು. ಆಲೂರ ಗ್ರಾಮದಲ್ಲಿ ಕೆಲಸ ಮುಗಿದ ನಂತರ ಅಲ್ಲಿಗೆ ಹೋಗಿದ್ದ ಲೈನ್ಮನ್ ಲೈನ್ ಕ್ಲಿಯರ್ ಎಂದು ಉಪ ವಿಭಾಗ ಕೇಂದ್ರಕ್ಕೆ ತಿಳಿಸಿದ್ದಾರೆ. ತಕ್ಷಣ ಯಡ್ರಾಮಿ ಉಪವಿಭಾಗ ಕೇಂದ್ರದ ಅಧಿಕಾರಿಗಳು ವಿದ್ಯುತ್ ಹಾಕಿದ್ದಾರೆ. ಆಗ ಅರಳಗುಂಡಗಿಯಲ್ಲಿ ಟ್ರನ್ಸ್ಫಾರ್ಮರ್ ಮೇಲೆ ನಿಂತು ಕೆಲಸ ಮಾಡುತ್ತಿದ್ದ ರಾಘವೇಂದ್ರ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.</p>.<p>ಯಡ್ರಾಮಿ ಪಿಎಸ್ಐ ಗಜಾನಂದ ಬಿರಾದಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>