ಅರಳಗುಂಡಗಿ ಮತ್ತು ಆಲೂರ ಗ್ರಾಮಕ್ಕೆ ‘ಎಲ್ಸಿ’ (ಲೈನ್ ಕಟ್) ತೆಗೆದುಕೊಳ್ಳಲಾಗಿತ್ತು. ಯಡ್ರಾಮಿ ಉಪವಿಭಾಗದಲ್ಲಿ ಅರಳಗುಂಡಗಿ ಹಾಗೂ ಆಲೂರಕ್ಕೆ ಒಂದೇ ಸಂಪರ್ಕ ಇತ್ತು. ಆಲೂರ ಗ್ರಾಮದಲ್ಲಿ ಕೆಲಸ ಮುಗಿದ ನಂತರ ಅಲ್ಲಿಗೆ ಹೋಗಿದ್ದ ಲೈನ್ಮನ್ ಲೈನ್ ಕ್ಲಿಯರ್ ಎಂದು ಉಪ ವಿಭಾಗ ಕೇಂದ್ರಕ್ಕೆ ತಿಳಿಸಿದ್ದಾರೆ. ತಕ್ಷಣ ಯಡ್ರಾಮಿ ಉಪವಿಭಾಗ ಕೇಂದ್ರದ ಅಧಿಕಾರಿಗಳು ವಿದ್ಯುತ್ ಹಾಕಿದ್ದಾರೆ. ಆಗ ಅರಳಗುಂಡಗಿಯಲ್ಲಿ ಟ್ರನ್ಸ್ಫಾರ್ಮರ್ ಮೇಲೆ ನಿಂತು ಕೆಲಸ ಮಾಡುತ್ತಿದ್ದ ರಾಘವೇಂದ್ರ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.