<p><strong>ಕಲಬುರ್ಗಿ: </strong>ಕಲಬುರ್ಗಿಯ ಗಂಜ್, ಯಡ್ರಾಮಿ ತಾಲ್ಲೂಕಿನ ಅಂಬರಖೇಡ ಗ್ರಾಮ ಹಾಗೂ ಅಫಜಲಪುರ ತಾಲ್ಲೂಕಿನ ಉಮರ್ಗಾ ಗ್ರಾಮದಲ್ಲಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಒಟ್ಟು ₹ 1.65 ಲಕ್ಷ ಮೌಲ್ಯದ ಮದ್ಯ, ಬಿಯರ್ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಕಲಬುರ್ಗಿಯ ಗಂಜ್ ಪ್ರದೇಶದಲ್ಲಿ ಅಕ್ರಮವಾಗಿ ಸ್ಕೂಟರ್ನಲ್ಲಿ ಸಾಗಾಟ ಮಾಡುತ್ತಿದ್ದ ಮದ್ಯ ಹಾಗೂ ಬಿಯರ್ಗಳನ್ನು ಕಲಬುರ್ಗಿ ವಲಯ–1ರ ಅಬಕಾರಿ ಇನ್ಸ್ಪೆಕ್ಟರ್ ಬಾಲಕೃಷ್ಣ ಮುದಕಣ್ಣ ನೇತೃತ್ವದ ತಂಡ ವಶಪಡಿಸಿಕೊಂಡಿದೆ.</p>.<p>21.600 ಲೀಟರ್ ಮದ್ಯ, 7.800 ಲೀಟರ್ ಬಿಯರ್, ಟಿವಿಎಸ್ ಎಕ್ಸೆಲ್ ಹಾಗೂ ಟಿವಿಎಸ್ ಜೂಪಿಟರ್ ಸ್ಕೂಟರ್ ಸೇರಿದಂತೆ ₹ 65 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಕಾರ್ಯಾಚರಣೆಯಲ್ಲಿ ಅಬಕಾರಿ ಪಿಎಸ್ಐ ಬಸವರಾಜ ಉಳ್ಳೆಸೂಗುರ, ಕೆ. ಪ್ರವೀಣಕುಮಾರ, ಸಿಬ್ಬಂದಿಯಾದ ವಸಂತ, ಮೋಹನ, ರಾಜೇಂದ್ರ, ಎಂ.ಡಿ. ಮುಬೀನ್, ರಾಮೇಶ್ವರ, ಶಿವಪ್ಪಗೌಡ ಮತ್ತು ವೆಂಕಟೇಶ ಭಾಗವಹಿಸಿದ್ದರು.</p>.<p>ಜೇವರ್ಗಿ ವಲಯದ ಅಬಕಾರಿ ಇನ್ಸ್ಪೆಕ್ಟರ್ ವನಿತಾ ಸೀತಾಳೆ ನೇತೃತ್ವದ ತಂಡವು ಶುಕ್ರವಾರ ಅಂಬರಖೇಡ ಗ್ರಾಮದ ಆಂಜನೇಯ ದೇವಸ್ಥಾನದ ಪಾಳು ಬಿದ್ದಿರುವ ಕಟ್ಟಡದ ಮೇಲೆ ದಾಳಿ ಮಾಡಿ ಮಾರಾಟಕ್ಕೆಂದು ಸಂಗ್ರಹಿಸಿಟ್ಟಿದ್ದ 8 ಪೆಟ್ಟಿಗೆಗಳಲ್ಲಿದ್ದ 69.120 ಲೀಟರ್ ಸ್ವದೇಶಿ ಮದ್ಯವನ್ನು ಜಪ್ತಿ ಮಾಡಿಕೊಂಡಿತು.</p>.<p>ಆಳಂದ ವಲಯದ ಅಬಕಾರಿ ಇನ್ಸ್ಪೆಕ್ಟರ್ ಶ್ರೀಶೈಲ ಅವಜಿ ನೇತೃತ್ವದ ತಂಡವು ಉಮರ್ಗಾ ಗ್ರಾಮದ ಲಕ್ಷ್ಮಿಕಾಂತ ಸಂಗಣ್ಣ ಎಂಬುವವರ ಕಿರಾಣಿ ಅಂಗಡಿಯ ಮೇಲೆ ದಾಳಿ ಮಾಡಿ 2 ಪೆಟ್ಟಿಗೆ (17.280 ಲೀಟರ) ಒರಿಜಿನಲ್ ಚಾಯ್ಸ್ ವಿಸ್ಕಿ ಹಾಗೂ 15.720 ಲೀಟರ ಬಿಯರ್ ಜಪ್ತಿ ಮಾಡಿತು. ಪರಾರಿಯಾಗಿದ್ದ ಆರೋಪಿ ವಿರುದ್ಧ ಅಬಕಾರಿ ಎಸ್ಐ ಅಶೋಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್. ಒಡೆಯರ ಅವರ ಮಾರ್ಗದರ್ಶನ, ಅಬಕಾರಿ ಡಿವೈಎಸ್ಪಿ ಮಹ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಒಟ್ಟಾರೆ ₹ 1 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಕಲಬುರ್ಗಿಯ ಗಂಜ್, ಯಡ್ರಾಮಿ ತಾಲ್ಲೂಕಿನ ಅಂಬರಖೇಡ ಗ್ರಾಮ ಹಾಗೂ ಅಫಜಲಪುರ ತಾಲ್ಲೂಕಿನ ಉಮರ್ಗಾ ಗ್ರಾಮದಲ್ಲಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಒಟ್ಟು ₹ 1.65 ಲಕ್ಷ ಮೌಲ್ಯದ ಮದ್ಯ, ಬಿಯರ್ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಕಲಬುರ್ಗಿಯ ಗಂಜ್ ಪ್ರದೇಶದಲ್ಲಿ ಅಕ್ರಮವಾಗಿ ಸ್ಕೂಟರ್ನಲ್ಲಿ ಸಾಗಾಟ ಮಾಡುತ್ತಿದ್ದ ಮದ್ಯ ಹಾಗೂ ಬಿಯರ್ಗಳನ್ನು ಕಲಬುರ್ಗಿ ವಲಯ–1ರ ಅಬಕಾರಿ ಇನ್ಸ್ಪೆಕ್ಟರ್ ಬಾಲಕೃಷ್ಣ ಮುದಕಣ್ಣ ನೇತೃತ್ವದ ತಂಡ ವಶಪಡಿಸಿಕೊಂಡಿದೆ.</p>.<p>21.600 ಲೀಟರ್ ಮದ್ಯ, 7.800 ಲೀಟರ್ ಬಿಯರ್, ಟಿವಿಎಸ್ ಎಕ್ಸೆಲ್ ಹಾಗೂ ಟಿವಿಎಸ್ ಜೂಪಿಟರ್ ಸ್ಕೂಟರ್ ಸೇರಿದಂತೆ ₹ 65 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಕಾರ್ಯಾಚರಣೆಯಲ್ಲಿ ಅಬಕಾರಿ ಪಿಎಸ್ಐ ಬಸವರಾಜ ಉಳ್ಳೆಸೂಗುರ, ಕೆ. ಪ್ರವೀಣಕುಮಾರ, ಸಿಬ್ಬಂದಿಯಾದ ವಸಂತ, ಮೋಹನ, ರಾಜೇಂದ್ರ, ಎಂ.ಡಿ. ಮುಬೀನ್, ರಾಮೇಶ್ವರ, ಶಿವಪ್ಪಗೌಡ ಮತ್ತು ವೆಂಕಟೇಶ ಭಾಗವಹಿಸಿದ್ದರು.</p>.<p>ಜೇವರ್ಗಿ ವಲಯದ ಅಬಕಾರಿ ಇನ್ಸ್ಪೆಕ್ಟರ್ ವನಿತಾ ಸೀತಾಳೆ ನೇತೃತ್ವದ ತಂಡವು ಶುಕ್ರವಾರ ಅಂಬರಖೇಡ ಗ್ರಾಮದ ಆಂಜನೇಯ ದೇವಸ್ಥಾನದ ಪಾಳು ಬಿದ್ದಿರುವ ಕಟ್ಟಡದ ಮೇಲೆ ದಾಳಿ ಮಾಡಿ ಮಾರಾಟಕ್ಕೆಂದು ಸಂಗ್ರಹಿಸಿಟ್ಟಿದ್ದ 8 ಪೆಟ್ಟಿಗೆಗಳಲ್ಲಿದ್ದ 69.120 ಲೀಟರ್ ಸ್ವದೇಶಿ ಮದ್ಯವನ್ನು ಜಪ್ತಿ ಮಾಡಿಕೊಂಡಿತು.</p>.<p>ಆಳಂದ ವಲಯದ ಅಬಕಾರಿ ಇನ್ಸ್ಪೆಕ್ಟರ್ ಶ್ರೀಶೈಲ ಅವಜಿ ನೇತೃತ್ವದ ತಂಡವು ಉಮರ್ಗಾ ಗ್ರಾಮದ ಲಕ್ಷ್ಮಿಕಾಂತ ಸಂಗಣ್ಣ ಎಂಬುವವರ ಕಿರಾಣಿ ಅಂಗಡಿಯ ಮೇಲೆ ದಾಳಿ ಮಾಡಿ 2 ಪೆಟ್ಟಿಗೆ (17.280 ಲೀಟರ) ಒರಿಜಿನಲ್ ಚಾಯ್ಸ್ ವಿಸ್ಕಿ ಹಾಗೂ 15.720 ಲೀಟರ ಬಿಯರ್ ಜಪ್ತಿ ಮಾಡಿತು. ಪರಾರಿಯಾಗಿದ್ದ ಆರೋಪಿ ವಿರುದ್ಧ ಅಬಕಾರಿ ಎಸ್ಐ ಅಶೋಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್. ಒಡೆಯರ ಅವರ ಮಾರ್ಗದರ್ಶನ, ಅಬಕಾರಿ ಡಿವೈಎಸ್ಪಿ ಮಹ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಒಟ್ಟಾರೆ ₹ 1 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>