ಕಲಬುರ್ಗಿ ನಗರದ ರೇವಣಸಿದ್ಧೇಶ್ವರ ಕಾಲೊನಿ ನಿವಾಸಿ ಮಂಜುನಾಥ ರಂಗರಾವ (27) ನೀರಿಗೆ ಹಾರಿದ ಯುವಕ. ಬೆಣ್ಣೆತೊರಾದ ನೀರಿಗೆ ಬೀಳುವ ಮುನ್ನ ಮೊಬೈಲ್ನಿಂದ ಮನೆಯವರಿಗೆ ಕರೆ ಮಾಡಿದ ಯುವಕ, ಕುರಿಕೋಟಾ ಸೇತುವೆಯಲ್ಲಿ ಜಿಗಿಯುತ್ತಿರುವುದಾಗಿ ಹೇಳಿದ್ದಾನೆ. ಕುಟುಂಬದವರು ತಕ್ಷಣವೇ ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ, ಸೇತುವೆ ಮೇಲೆ ಯುವಕನ ದ್ವಿಚಕ್ರವಾಹನ ಮಾತ್ರ ಸಿಕ್ಕಿದೆ. ಯುವಕನ ಹುಡುಕಾಟ ಭಾನುವಾರ ರಾತ್ರಿ ಕೂಡ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.