ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ಜಿಮ್ಸ್ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ ಔಷಧಿ ವಿತರಿಸಿದರು. ಆಯುರ್ವೇದ ಪದ್ಧತಿಯ ಷಂಶಮನಿ ವಟಿ, ಹೋಮಿಯೋಪಥಿಕ್ನ ಅರ್ಸೆನಿಕ್ ಅಲ್ಬಂ–30 ಹಾಗೂ ಯುನಾನಿಯ ಆರ್ಕ್ ಎ ಅಜೀಬ್ ಔಷಧಿಗಳನ್ನು ಅವರು ನೀಡಿ, ಅವುಗಳನ್ನು ತೆಗೆದುಕೊಳ್ಳುವ ವಿಧಾನವನ್ನೂ ತಿಳಿಸಿದರು.