‘ಪ್ರಕರಣ ಮುಂದುವರಿಸದಿರಲು ಶಂಕರಗೌಡ ಪಾಟೀಲ ಅವರು ₹3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾನು ₹76 ಲಕ್ಷ ಹಣ ಕೊಡುತ್ತೇನೆ ಎಂದು ಹೇಳಿ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಹಣ ಡ್ರಾ ಮಾಡಿಸಿ, ನನ್ನ ಅಳಿಯನ ಮೂಲಕ ತಲುಪಿಸಿದ್ದೆ’ ಎಂದು ಆರ್.ಡಿ. ಪಾಟೀಲ ವಿಡಿಯೊದಲ್ಲಿ ಹೇಳಿದ್ದ. ‘ಆರ್.ಡಿ ಪಾಟೀಲ ಹೇಳಿದ್ದ ಬ್ಯಾಂಕ್ ಆಫ್ ಬರೋಡ ಶಾಖೆಯ ಆತನ ಬ್ಯಾಂಕ್ ಖಾತೆ ವಿವರ ಪರಿಶೀಲಿಸಲಾಗಿದ್ದು, ₹76 ಲಕ್ಷ ಹಣ ವಿತ್ ಡ್ರಾ ಆಗಿಲ್ಲ. ಖಾತೆಯಿಂದ ವಹಿವಾಟು ನಡೆದ ದಾಖಲೆಗಳು ನಮೂದು ಆಗಿಲ್ಲ’ ಎಂದು ಅವರು ಹೇಳಿದ್ದಾರೆ.