‘ವಿಮರ್ಶಕರಿಗಿಂತ ಕವಿ, ಕಾದಂಬರಿಕಾರ ಭಿನ್ನ. ಈ ಭಾಗದ ಕವಿಗಳಲ್ಲಿ ರಾಜ್ಯ ಮತ್ತು ದೇಶದ ಸಮಸ್ಯೆಗಳು, ನೈತಿಕತೆ ಮತ್ತು ಮಾನವೀಯತೆಯ ತುಡಿತವಿದೆ. ಕವಿ ಅಥವಾ ಲೇಖಕ ತಾನು ಬರೆದದ್ದಲ್ಲೆವೂ ಉತ್ತಮ ಎಂದು ಭಾವಿಸಬಾರದು. ಎಲ್ಲಾ ರೀತಿಯ ಸಾಹಿತ್ಯವನ್ನು ಓದಬೇಕು, ನಿರಂತರ ಅಧ್ಯಯನಶೀಲರಾಗಬೇಕು. ಸ್ಥಳೀಯ ಸಂಸ್ಕೃತಿ ಮತ್ತು ಚರಿತ್ರೆಯನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.