‘ಕಾಲುದಾರಿಯಲ್ಲಿನ ತಗ್ಗುಗಳಿಗೆ ಹಾಗೂ ಕೆಸರು ನೀರು ನಿಲ್ಲುವ ಸ್ಥಳದಲ್ಲಿ ಸ್ಥಳೀಯ ರೈತರೇ ಹಲವು ಸಲ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಲು, ಮಣ್ಣು ತಂದು ಹಾಕಿಕೊಂಡಿದ್ದಾರೆ. ಆದರೂ ರಸ್ತೆಯ ರೂಪ ಬಾರದೇ ಪ್ರತಿನಿತ್ಯ ಸಂಕಷ್ಟ ಪಡುವಂತಾಗಿದೆ’ ಎಂದು ರೈತರಾದ ತಿಮ್ಮಣ್ಣ ರಾಂಪುರು, ಬಸವರಾಜ ಗಂಜಿ, ಬಸವರಾಜ ಬಳಗಾರ, ಚಂದ್ರಶೇಖರ ಸಜ್ಜನಶೆಟ್ಟಿ, ಶರಣಪ್ಪ ಅಂಗಡಿ, ಶರಣಪ್ಪ ನಾಲವಾರ, ದೇವಿಂದ್ರ ಮಳಕರ, ನರಸಪ್ಪ ರಾಂಪುರು ಅಳಲು ತೋಡಿಕೊಂಡರು.