ಕಲಬುರ್ಗಿ: ‘ಮಾರ್ಚ್ 3ರಂದು ನಮ್ಮ ಮನೆಯಲ್ಲಿಟ್ಟಿದ್ದ ₹ 20 ಲಕ್ಷ ನಗದು, 25 ತೊಲ ಚಿನ್ನವನ್ನು ದರೋಡೆಕೋರರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ದೂರು ನೀಡಲು ಹೋದರೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ’ ಎಂದು ಎಸ್.ಎಸ್. ಟಿ.ವಿ. ಮಾಲೀಕ, ಹಿರಿಯ ಪತ್ರಕರ್ತ ಶಂಕರ ಕೋಡ್ಲಾ ಬೇಸರ ವ್ಯಕ್ತಪಡಿಸಿದರು.