ಈ ಭಾಗದಲ್ಲಿ ಸಿಮೆಂಟ್, ಪರ್ಸಿ ಕಲ್ಲನ್ನು ಹೊತ್ತೊಯ್ಯುವ ಅನೇಕ ವಾಹನಗಳು ನಿತ್ಯ ಸಂಚರಿಸುತ್ತವೆ. ಇದರಿಂದ ರಸ್ತೆ ಹಾಳಗಿದ್ದಲ್ಲದೇ ನಿತ್ಯ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಒಮ್ಮೆ ಈ ಕಡೆ ಗಮನಹರಿಸಿ ರಸ್ತೆಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬಿಜೆಪಿ ಮುಖಂಡ ಬೆಳ್ಳಪ್ಪ ಖಣದಾಳ ಮನವಿ ಮಾಡಿದ್ದಾರೆ.